ಹುಬ್ಬಳ್ಳಿ:ಛೋಟಾ ಬಾಂಬೆ ಖ್ಯಾತಿಯ ಹುಬ್ಬಳ್ಳಿಯಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿದ ಪರಿಣಾಮ ಓರ್ವ ಯುವಕ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಮಧ್ಯರಾತ್ರಿ ಕಮರಿಪೇಟ್ ನಲ್ಲಿ ನಡೆದಿದೆ.
ಹೀಗೆ ಮಾರಕಾಸ್ತ್ರದ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರೋ ಈತನ ಹೆಸರು ರಾಜು ಕಟಾರೆ ಅಲಿಯಾಸ್ ಬೆಂಗಳೂರ ರಾಜಾ ಕಮರಿಪೇಟೆಯ ನಿವಾಸಿ,ಈತನ ಜೊತೆ ಹಲವು ವರ್ಷಗಳಿಂದ ದ್ವೇಷ ಸಾದಿಸುತ್ತಾ ಬಂದಿದ್ದ ವೆಂಕಟೇಶ ಅಲಿಯಾಸ್ ಕಂಟ್ಯಾ ಎಂಬಾತನೇ,ಕಮರಿಪೇಟ್ ನಲ್ಲಿ ಶನಿವಾರ ರಾತ್ರಿ ಮನೆಯ ಹೊರಗಡೆ ನಿಂತಿದ್ದ ರಾಜುವಿನ ಮೇಲೆ ಮಾರಕಾಸ್ತ್ರದಿಂದ ಏಕಾಏಕಿ ದಾಳಿ ಮಾಡಿದ ಪರಿಣಾಮ ರಾಜು ಗಂಭೀರವಾಗಿ ಗಾಯಗೊಂಡಿದ್ದಾನೆ.
ಕೂಡಲೇ ರಾಜುನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಸದ್ಯ ರಾಜುವಿನ ಸ್ಥಿತಿ ಗಂಭೀರವಾಗಿದೆ, ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಿಮ್ಸ್ ಆಸ್ಪತ್ರೆಗೆ ಹು-ಧಾ ಕಾನೂನು ಸುವ್ಯವಸ್ಥೆ ಡಿಸಿಪಿ ಶಾಹಿಲ್ ಬಾಗ್ಲಾ ಘಟನೆಯ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೇಲ್ನೋಟಕ್ಕೆ ಇದೆಲ್ಲ ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಹಲ್ಲೆ ಎಂದು ಪೊಲೀಸ ಮೂಲಗಳಿಂದ ತಿಳಿದು ಬಂದಿದೆ.