Uncategorized
ಸಿಪಿಐ ಕಮತಗಿ ವಿರುದ್ಧ ಷಡ್ಯಂತ್ರ
ಬಾಗಲಕೋಟೆ: ಬೀಳಗಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವಾನಂದ ಕಮತಗಿ ವಿರುದ್ಧ ಷಡ್ಯಂತ್ರ ನಡೆದಿದ್ದು, ಇದಕ್ಕೆ ಸ್ಥಳೀಯ ಠಾಣೆಯ ಕೆಲವು ಸಿಬ್ಬಂದಿಗಳೇ ಕಾರಣವೆಂದು ಹೇಳಲಾಗುತ್ತಿದೆ.
ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ನೀಡಿರುವ ನೋಟೀಸ್ ಬೇರೆಯದ್ದೆ ವಿಷಯವಾಗಿದ್ದು, ಅದು ಸಿಬ್ಬಂದಿಗಳ ಟಿಎ ಹಣವನ್ನ ಪಡೆಯಲಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಅಸಲಿಗೆ ಯಾವುದೇ ಸಿಬ್ಬಂದಿಯ ಟಿಎ ಹಣವನ್ನ ಸಿಪಿಐ ಪಡೆಯಲು ಅವಕಾಶವೇ ಇಲ್ಲ.
ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಸಿಪಿಐ ಅವರ ಹೆಸರು ಕೆಡಿಸಲು ಎಸ್ಪಿ ನೀಡಿರುವ ಬೇರೆ ವಿಷಯದ ನೋಟೀಸ್ನ್ನ ಬೇರೆ ಥರದಲ್ಲಿ ಬಿಂಬಿಸುವ ಯತ್ನ ನಡೆದಿದೆ ಎನ್ನಲಾಗಿದೆ.
ಸಿಪಿಐ ಕಮತಗಿ ದಕ್ಷ ಅಧಿಕಾರಿಯಾಗಿದ್ದು, ಅದನ್ನ ಅಳಿಸುವ ಯತ್ನವಾಗಿ ಹೀಗೆ ಕೆಲವು ಸಿಬ್ಬಂದಿಗಳು ಮಾಡುತ್ತಿರುವುದು ಖೇದಕರವಾಗಿದೆ.