Uncategorizedನಮ್ಮೂರುಹುಬ್ಬಳ್ಳಿ- ಧಾರವಾಡ

ಹುಬ್ಬಳ್ಳಿಯ ಜನತಾ ಬಜಾರನಲ್ಲಿ ಪೊಲೀಸರು ಮಾಡಿದ್ದೇನು ಗೊತ್ತಾ..!

Spread the love


ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಹಾಗೂ ನಗರ ಸಂಚಾರ ಪೊಲೀಸರು‌ ಜನತಾ ಬಜಾರ, ಚೆನ್ನಮ್ಮ ವೃತ್ತ ಅಕ್ಕಪಕ್ಕದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದವರನ್ನು ತೆರವುಗೊಳಿಸಿದರು.

ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ಅಂಗಡಿಗಳನ್ನು ಇಟ್ಟಿರುವುದು, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿಕೊಂಡಿರುವುದು, ಹಣ್ಣು ಮತ್ತು ಹೂ, ತರಕಾರಿ ವ್ಯಾಪಾರ ಮಾಡಲು ಪೆಟ್ಟಿಗೆ ಅಂಗಡಿಗಳನ್ನು ಫುಟ್‌ಪಾತ್‌ನಲ್ಲೇ ಅಳವಡಿಸಿಕೊಂಡಿರುವುದನ್ನು ತೆರವುಗೊಳಿಸಲಾಯಿತು.

ತೆರವುಗೊಳಿಸುವ ಸಂದರ್ಭದಲ್ಲಿ ವ್ಯಾಪಾರಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುವಂತಹ ದೃಶ್ಯ ಮನಕುಲಕುವಂತೆ ಇತ್ತು.

ಕಾರ್ಯಾಚರಣೆ ವೇಳೆ ಪೂರ್ವ ಸಂಚಾರಿ ಕಾಡದೇವರಮಠ, ಪಿಎಸ್ ಐ ಶರಣ ದೇಸಾಯಿ, ಪಾಲಿಕೆ‌ ಅಧಿಕಾರಿಗಳು ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page