Uncategorizedನಮ್ಮೂರುಹುಬ್ಬಳ್ಳಿ- ಧಾರವಾಡ
ಅಯ್ಯೋ! ನವಲಗುಂದ ಬಳಿ ಬಸ್ ಸ್ಟೇರಿಂಗ್ ಕಟ್ಟಾಗಿ ಸಂಭವಿಸಿತು ಅಪಘಾತ : ಬಸ್ಸಿನಲ್ಲಿ ಇದ್ದವರೂ ಏನಾದರೂ?
ನವಲಗುಂದ : ಬಸ್ಸೊಂದು ಸ್ಟೇರಿಂಗ್ ಕಟ್ ಆದ ಪರಿಣಾಮ ನವಲಗುಂದ ಪಟ್ಟಣದ ಹೊರ ವಲಯದ ನರಗುಂದ ರಸ್ತೆಯ ಬೆಣ್ಣೆ ಹಳ್ಳದ ಸೇತುವೆ ಬಳಿ ಇಂದು ಸಂಜೆ ಅಪಘಾತ ಸಂಭವಿಸಿದ್ದು, 14 ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.
ಬಸ್ಸಿನಲ್ಲಿ 30 ಪ್ರಯಾಣಿಕರು ಇದ್ದು ಎನ್ನಲಾಗಿದ್ದು, ಅದರಲ್ಲಿ 14 ಪ್ರಯಾಣಿಕರು ಗಾಯಗೊಂಡಿದ್ದಾರೆ.ಇದರ ಪೈಕಿ ಓರ್ವ ವೃದ್ಧೆಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.
ಗಾಯಗೊಂಡ ಪ್ರಯಾಣಿಕರಿಗೆ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಓರ್ವ ವೃದ್ಧಗೆ ಕಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.