Uncategorized
“ಹುಬ್ಬಳ್ಳಿ”ಯಿಂದ ಹೊಟ್ಟೆ ಪಾಡಿಗೆಗಾಗಿ “ಕೊಡಗಿ”ಗೆ ದುಡಿಯಲು ಹೋದವರು “ದುರ್ಮರಣ”
ಹುಬ್ಬಳ್ಳಿ:ಹೊಟ್ಟೆ ಪಾಡಿಗೆಗಾಗಿ ಹುಬ್ಬಳ್ಳಿ ನಗರದಿಂದ ಕೊಡಗು ಜಿಲ್ಲೆಗೆ ಕೆಲಸಕ್ಕೆಂದು ಹೋಗಿದ್ದ ಇಬ್ಬರು ಕಾರ್ಮಿಕರು ಭೂಕುಸಿತದಿಂದ ಮೃತಪಟ್ಟ ಘಟನೆ ಕೊಡಗಿನಲ್ಲಿ ನಡೆದಿದೆ.
ಸುಮಾರು 35 ರಿಂದ45 ವರ್ಷದ ಒಳಗಿನ ಇಬ್ಬರು ಕಾರ್ಮಿಕರು ಕೊಡಗಿನಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಭೂ ಕುಸಿತ ಆದ ಪರಿಣಾಮ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ, ಇಬ್ಬರ ಹೆಸರು ಲಿಂಗಪ್ಪ ಮತ್ತು ಬಸವ ಎಂದು ಅಷ್ಟೇ ತಿಳಿದು ಬಂದಿದ್ದು ಹುಬ್ಬಳ್ಳಿ ನಗರದವರಾಗಿದ್ದು ಯಾವ ಏರಿಯಾದವರು ಅಂತಾ ತಿಳಿದು ಬಂದಿಲ್ಲ.
ಸದ್ಯ ಈ ಇಬ್ಬರ ಶವವನ್ನು ಕೊಡಗು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ನಿಮಗೇನಾದ್ರು ಮೃತಪಟ್ಟ ಈ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದಲ್ಲಿ ಕೊಡಗು ಪೊಲೀಸರಿಗೆ ಮಾಹಿತಿಯನ್ನು ನೀಡಿ ಮೃತಪಟ್ಟ ವ್ಯಕ್ತಿಗಳ ಶವ ಅವರ ವಾರಸುದಾರರಿಗೆ ಸಿಗಲು ಸಹಾಯ ಮಾಡಿ.