Uncategorized

“DCP” ಕಚೇರಿಯಲ್ಲಿಯೇ “ಡೀಲ್” ನಡೆಸಿದ್ದ “ಹೆಡ್ ಕಾನ್ಸ್ಟೇಬಲ್”ಸಸ್ಪೆಂಡ್..!

Spread the love

ಹುಬ್ಬಳ್ಳಿ:ಹುಬ್ಬಳ್ಳಿ: ಸಮಾಜಕ್ಕೆ ಕಂಟಕ ಆಗುವವರನ್ನ ರೌಡಿ ಷೀಟರ್ ಮಾಡಿ ಅವರಿಗೆ ಹದ್ದು ಬಸ್ತಿನಲ್ಲಿಡುವುದನ್ನ ಇಲಾಖೆ ಮೊದಲಿಂದಲೂ ರೂಢಿಸಿಕೊಂಡು ಬಂದಿದೆ. ಆದರೆ, ಇಲಾಖೆಯ ಹೆಡ್ಡಾಫೀಸ್‌ಲ್ಲೇ ಮಹಾನುಭಾವ ರೌಡಿ ಷೀಟರ್‌ಗಳಿಂದ ಹಣ ಪಡೆಯುತ್ತಿದ್ದ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು.

ವರದಿ ಪ್ರಸಾರ ಮಾಡಿದ ಬಳಿಕ ಕಮೀಷನರ್ ರಮನ್ ಗುಪ್ತಾ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ಎಸಿಪಿ ಆರ್ ಕೆ ಪಾಟೀಲ್ ನೇತೃತ್ವದಲ್ಲಿ ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದರು,ಆದ್ರೆ ಈ ವಿಚಾರಣೆ ಆಮೆ ಗತಿಯಲ್ಲಿ ನಡೀತಿತ್ತು.ಅಷ್ಟೇ ಅಲ್ಲದೆ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಸೂಕ್ತ ದಾಖಲಾತಿಗಳನ್ನು ಕೊಡುವಂತೆ ಸುದ್ದಿ ಪ್ರಸಾರ ಮಾಡಿದವರಿಗೆ ನೋಟಿಸ್ ಕೂಡಾ ನೀಡಲಾಗಿತ್ತು.

ಅದೇ ರೀತಿ ಸೂಕ್ತವಾದ ದಾಖಲೆಗಳನ್ನು ನೀಡಿದ ನಂತರದಲ್ಲಿ ವಿಚಾರಣೆ ಹಂತ ಮಾತ್ರ ಕೆಳಹಂತದಲ್ಲಿಯೇ ಉಳಿದಿತ್ತು,ಹೀಗಾಗಿ ಕಮೀಷನರ್ ಸಾಹೇಬ್ರೆ ತಪ್ಪಿತಸ್ಥರ ಮೇಲೆ ಕ್ರಮ ಯಾವಾಗ ಎಂದು ಮತ್ತೆ ಸುದ್ದಿಯನ್ನು ಬಿತ್ತರ ಮಾಡಿದ್ದೇ ತಡ ಡಿಸಿಪಿ ಕಚೇರಿಯಲ್ಲಿ ಡೀಲ್ ಮಾಡಿದ ಆಸಾಮಿಯನ್ನು ಇದೀಗ ಪೊಲೀಸ್ ಕಮೀಷನರ್ ರಮನ್ ಗುಪ್ತಾ ಅಮಾನತ್ತು ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Breaking News
HomeHomeHomeHomeSample Page

You cannot copy content of this page