ಧಾರವಾಡ “ಲೋಕಸಭಾ” ಚುನಾವಣೆ “ಕಾಂಗ್ರೆಸ್” ಅಭ್ಯರ್ಥಿಯಾಗಿ “ಶಂಕರಪಾಟೀಲ್” ಮುನೇನಕೊಪ್ಪ..!?
ಹುಬ್ಬಳ್ಳಿ:ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು ಧಾರವಾಡ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತವಾಗಿದೆ.ಆದ್ರೆ ಜೋಶಿ ವಿರುದ್ಧ ಕಣಕ್ಕೆ ಕಾಂಗ್ರೆಸ್ ಪಕ್ಷದಿಂದ ಲಿಂಗಾಯತ ಅಭ್ಯರ್ಥಿಯನ್ನು ಇಳಿಸಲು ಮುಂದಾಗಿದ್ದು ಮಾಜಿ ಬಿಜೆಪಿ ಸಚಿವರನ್ನು ಕರೆ ತರಲು ಕಸರತ್ತು ನಡೆಸಿದ್ದಾರೆ.
ಜಗದೀಶ ಶೆಟ್ಟರ ಅವರು ಬಿಜೆಪಿ ಪಕ್ಷ ತೊರೆದ ನಂತರ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಲು ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿದ್ದಾರೆ.ಹೀಗಾಗಿ ಜಗದೀಶ ಶೆಟ್ಟರ ಅವರ ಶಿಷ್ಯ ಶಂಕರ ಪಾಟೀಲ್ ಅವರಿಗೆ ಕಾಂಗ್ರೆಸ್ ಪಕ್ಷ ಗಾಳ ಹಾಕುತ್ತಿದೆ ಎಂಬ ಸುಳಿವನ್ನು ಸಚಿವ ಎಚ್ ಕೆ ಪಾಟೀಲ್ ಬಿಟ್ಟುಕೊಟ್ಟಿದ್ದಾರೆ.
ಶಂಕರ ಪಾಟೀಲ್ ಮುನೇನಕೊಪ್ಪ ಸೌಮ್ಯ ಸ್ವಭಾವದ ವ್ಯಕ್ತಿ ರಾಜಕೀಯದಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದಾರೆ.ಹೀಗಾಗಿ ಅಂತವರು ಪಕ್ಷಕ್ಕೆ ಬಂದ್ರೆ ಒಳ್ಳೆಯದು ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ಸಿಗತ್ತೆ.ಅಂತಾ ಶಂಕರಪಾಟೀಲ್ ಮುನೇನಕೊಪ್ಪ ಅವರ ಪರ ಎಚ್ ಕೆ ಪಾಟೀಲ್ ಬ್ಯಾಟಿಂಗ್ ಬಿಸಿದ್ದು ಇದೀಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟುಮಾಡಿದೆ.