ಅಪರಾಧಎಕ್ಸ್ಲುಸೀವ್ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ “ಮಧ್ಯ ರಾತ್ರಿ”1ಗಂಟೆಗೆ “ಆಟೋ” ಚಾಲಕನ ಭೀಕರ ಕೊಲೆ..!

Spread the love

ಹುಬ್ಬಳ್ಳಿ:ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ನಾಣ್ಣುಡಿಯಂತೆ ಅಣ್ಣ-ತಮ್ಮಂದಿರ ಮನೆಯಲ್ಲಿನ ಆಂತರಿಕ ಕಲಹ ವಿಕೋಪಕ್ಕೆ ಹೋದ ಹಿನ್ನೆಲೆ ಅಣ್ಣನೊಬ್ಬ ಒಡಹುಟ್ಟಿದ್ದ ತಮ್ಮನನ್ನೇ ಚಾಕು ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ಮಂಗಳವಾರ ಮಧ್ಯರಾತ್ರಿ 1 ಗಂಟೆಗೆ ನಡೆದಿದೆ.

ಹುಬ್ಬಳ್ಳಿಯ ವಿಜಯನಗರದ ನಿವಾಸಿಯಾದ 29 ವರ್ಷದ ಪವನ ಕಟವಾಟೆ ಎಂಬಾತ ಅಟೋ ಚಾಲಕನಿಗೆ ಕೆಲಸವನ್ನು ಮಾಡಿಕೊಂಡಿದ್ದ,ಇನ್ನು ವಿಪರೀತ ಕುಡಿತದ ಚಟಕ್ಕೆ ದಾಸನಾಗಿದ್ದ ಈತ ತನ್ನ ಮನೆ ಸೇರಿದಂತೆ ವಿಜಯನಗರದಲ್ಲಿಯೂ ಕೂಡಾ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿ ಮಾಡುತ್ತಿದ್ದ.ಹೀಗಾಗಿ ಈತನ ಕಾಟದಿಂದ ಬೇಸತ್ತ ಕುಟುಂಬದವರು ಈತನನ್ನು ಮನೆಯಿಂದ ದೂರ ಇಟ್ಟಿದ್ದರು.

ಹೀಗಾಗಿ ಪವನ ವಿಜಯನಗರದಲ್ಲಿನ ವಿಜಯ ಹೋಟೆಲ್ ಬಳಿಯಲ್ಲಿಯೇ ರೂಮ್ ಮಾಡಿಕೊಂಡು ತನ್ನ ಜೀವನ ಸಾಗಿಸುತ್ತಿದ್ದ.ಆದ್ರೆ ಮಂಗಳವಾರ ಅಣ್ಣ ತಮ್ಮಂದಿರ ನಡುವೆ ಜಗಳ ವಿಕೋಪಕ್ಕೆ ಹೋದ ಹಿನ್ನೆಲೆ. ಅಣ್ಣನಾದ ರಾಜು ಮಂಗಳವಾರ ಮಧ್ಯರಾತ್ರಿ 1 ಗಂಟೆಗೆ ಪವನ ವಾಸವಿದ್ದ ಬಾಡಿಗೆ ರೂಮ್ ಗೆ ಬಂದು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿ. ಅಲ್ಲಿಂದ ತನ್ನ ಮನೆಗೆ ತೆರಳಿ ಸ್ನಾನ ಮಾಡಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ರಾಜುನನ್ನು ಬಂದನ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page