ಅಪರಾಧಎಕ್ಸ್ಲುಸೀವ್ನಮ್ಮೂರುಬ್ರೇಕಿಂಗ್ ನ್ಯೂಸ್ಹುಬ್ಬಳ್ಳಿ- ಧಾರವಾಡ
ಧಾರವಾಡ DC ಕಚೇರಿ ಪಕ್ಕದಲ್ಲೇ ACB ರೇಡ್..!ಲಕ್ಷ ಲಕ್ಷ ದುಡ್ಡು.
ಧಾರವಾಡ : ಜಿಲ್ಲಾಧಿಕಾರಿ ಕಚೇರಿಯ ಪಕ್ಕದಲ್ಲಿರುವ ಆಹಾರ,ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ.
ಧಾರವಾಡದ ಆಹಾರ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಮೇಲೆ ದಾಳಿ ನಡೆದಿದ್ದು, ದಾಳಿಯಲ್ಲಿ ಕಚೇರಿಯ ಒಳಗೆ 7 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣ ಪತ್ತೆಯಾಗಿದೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಎಸಿಬಿ ವೇಣುಗೋಪಾಲ ನೇತೃತ್ವದ ತಂಡ,ದಾಖಲೆಯಿಲ್ಲದ ಲಕ್ಷ ಲಕ್ಷ ಹಣವನ್ನು ವಶಕ್ಕೇ ಪಡೆದಿದ್ದು,ಇನ್ನು ಜಂಟಿ ನಿರ್ದೇಶಕರ ಕಾರ್ಯಾಲಯದಲ್ಲಿ ಪರಿಶೀಲನೆ ಮುಂದುವರೆದಿದೆ.