ಅಪರಾಧಎಕ್ಸ್ಲುಸೀವ್ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ |ನಡು ರಾತ್ರಿ” ಯುವಕನನ್ನು ಅಟ್ಟಾಡಿಸಿ “ಲೈವ್” ಮರ್ಡರ್…!
ಹುಬ್ಬಳ್ಳಿ:ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಆಟದ ಮೈದಾನದಲ್ಲಿಯೇ ಅಟ್ಟಾಡಿಸಿ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ ಘಟನೆ ರವಿವಾರ ತಡರಾತ್ರಿ ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಸೆಟ್ಲಿಮೆಂಟ್ ನ ನಿವಾಸಿ ಸುಶಾಂತ ಬಳ್ಳಾರಿ ಎಂಬಾತ ನಿನ್ನೇ ತಡರಾತ್ರಿ ಗೋಕುಲ್ ರಸ್ತೆಯಲ್ಲಿನ ಡೇನಿಸನ್ ಹೋಟೆಲ್ ಮುಂಭಾಗದ ಆಟದ ಮೈದಾನದಲ್ಲಿ ತನ್ನ ಸಂಬಂದಿಯಾದ ರಾಹುಲ್ ಎಂಬಾತನ ಜೊತೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಜಗಳ ತೆಗೆದಿದ್ದಾನೆ.
ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ರಾಹುಲ ತನ್ನ ಗೆಳೆಯರ ಜೊತೆ ಸೇರಿ ಸುಶಾಂತ ಮೇಲೆ ಹಲ್ಲೆ ನಡೆಸಿದ್ದಾನೆ ಹಲ್ಲೆ ನಡೆಸಿದ ಕೂಡಲೇ ಕೆಳಗೆ ಬಿದ್ದ ಸುಶಾಂತ್ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಹಾಕಿ ಭೀಕರವಾಗಿ ಕೊಲೆ ಮಾಡಿ ಅಲ್ಲಿಂದ ಬೆಂಗಳೂರಿಗೆ ಪರಾರಿಯಾಗಲು ಯತ್ನಿಸಿದಾಗ ಗೋಕುಲ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.