ಅಪರಾಧ

“ಮದುವೆ” ಆಗೋದಾಗಿ “ಗರ್ಭವತಿ” ಮಾಡಿ “ಕೈಕೊಟ್ಟ” ಯುವಕ…ನ್ಯಾಯಕ್ಕಾಗಿ “ವಿದ್ಯಾಗಿರಿ” ಠಾಣೆಗೆ ಮಹಿಳೆ ಅಲೆದಾಟ..!

Spread the love

ಹುಬ್ಬಳ್ಳಿ:ನಮ್ಮ ಹು-ಧಾ ಕಮಿಷನರೇಟ್’ನ ಕೆಲವೊಂದಿಷ್ಟು ಇನ್ಸ್ಪೆಕ್ಟರ್’ಗಳಿಗೆ ತಾವು ಮೈಮೇಲೆ ಹಾಕಿರುವ ಖಾಕಿಗ ತಕ್ಕಂತೆ ಕೆಲಸ ಮಾಡುವ ಗೋಜಿಗೆ ಹೋಗುತ್ತಿಲ್ಲ. ಅದರ ಸಾಲಿಗೆ ಇದೀಗ ಧಾರವಾಡ ವಿದ್ಯಾಗಿರಿ ಠಾಣೆಯ ಇನ್ಸ್ಪೆಕ್ಟರ್ ಕೂಡಾ ಮುಂದಾಗಿದ್ದಾರೆ.

ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿನ ವ್ಯಾಪ್ತಿಯಲ್ಲಿ ವಿವಾಹಿತ ಮಹಿಳೆಯೊಬ್ಬರು 9 ವರ್ಷಗಳ ಹಿಂದೆ ವಿವಾಹ ಆಗಿದ್ದರು.ಆದ್ರೆ ಅವರ ಗಂಡನ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರು ಗಂಡನ ಮನೆ ತೊರೆದು ಶ್ರೀರಾಮ ನಗರದ ತನ್ನ ತವರು ಮನೆಗೆ ಬಂದಿದ್ದಳು.ಅದೇ ಏರಿಯಾದಲ್ಲಿದ್ದ ಯುವಕನೊಬ್ಬ ಮಹಿಳೆಗೆ ಮತ್ತೇ ಬದುಕು ಕೊಡುವ ಭರವಸೆ ಮೂಡಿಸಿ ಮಹಿಳೆಯ ಜೊತೆ ಮೂರು ವರ್ಷ ಸಂಸಾರ ಮಾಡಿದ್ದಾನೆ ಅಂತೇ.

ಅಷ್ಟೇ ಅಲ್ಲದೆ ಮಹಿಳೆಯ ಜೊತೆ ಸಂಸಾರ ಮಾಡಿ ಮೂರು ಸಾರಿ ಅಬಾಷೆನ್ ಕೂಡಾ ಮಾಡಿಸಿದ್ದಾನೆ ಆದ್ರೆ ಮಹಿಳೆ ಇದೀಗ ಮತ್ತೆ 5 ತಿಂಗಳ ಗರ್ಭವತಿ ಆಗಿದ್ದಾಳೆ,ಆದ್ರೆ ಬದುಕು ಕಟ್ಟುವ ಭರವಸೆ ಕೊಟ್ಟಿದ್ದ ಯುವಕ ಮಹಿಳೆಗೆ ಕೈಕೊಟ್ಟಿದ್ದಾನೆ.ಹೀಗಾಗಿ ತನಗೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಮಹಿಳೆ 1 ತಿಂಗಳಿಂದ ವಿದ್ಯಾಗಿರಿ ಪೊಲೀಸ್ ಠಾಣೆಗೆ ಅಲೆದರು ಕೂಡಾ ಇನ್ಸ್ಪೆಕ್ಟರ್ ಸಾಹೇಬ್ರು ಮಾತ್ರ ಕ್ಯಾರೇ ಎನ್ನುತ್ತಿಲ್ಲ.

ಹೀಗಾಗಿ ನೊಂದ ಮಹಿಳೆಗೆ ನ್ಯಾಯ ಕೊಡಿಸಬೇಕಾದ ಇನ್ಸ್ಪೆಕ್ಟರ್ ಅವರಿಗೆ ಮಾನವೀಯತೆ ಇಲ್ಲವೇ ಅಥವಾ ಯಾವದಾದ್ರು ಪ್ರಭಾವಕ್ಕೆ ಒಳಗಾಗಿ ಈ ಪ್ರಕರಣವನ್ನು ಹಳ್ಳ ಹಿಡಿಸುವ ಕಾರ್ಯಕ್ಕೆ ಮುಂದಾಗಿದ್ದರೆಯೇ..!? ಎಂಬ ಪ್ರಶ್ನೆಗಳು ಇದೀಗ ಮೂಡಿದ್ದು ಇದಕ್ಕೆ ಉತ್ತರವನ್ನು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಕೊಡಬೇಕಾಗುತ್ತೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page