27 ರ ಮಹಿಳೆಯ ಮೇಲೆ ವೃದ್ಧನಿಂದ ರೇಪ್ ಮಾಡಿ ಕೊಲೆ…!
ಕೊಲೆಯಾದ ಮಹಿಳೆಯ ಗಂಡ ಹೇಳಿದ್ದು ಹೀಗೆ.
ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಕುರಿಗಾಹಿ ಮಹಿಳೆಯನ್ನು ಕೊಲೆ ಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಕುಂದಗೋಳ ಪೋಲಿಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದ ಲಕ್ಷ್ಮಿ ವಿಠ್ಠಲ ಕಳ್ಳಿಮನಿ (27) ಮೃತ ಮಹಿಳೆಯಾಗಿದ್ದಾಳೆ. ಈಕೆ ಫೆ.18 ರಂದು ಯರಗುಪ್ಪಿ ಗ್ರಾಮದ ಫಕ್ಕಿರಪ್ಪ ಈಶ್ವರಪ್ಪ ಹಿರೇಮನಿ (ಜಡಿತಲಿ) ಎಂಬುವವರ ಜಮೀನಿಗೆ ಹೊಂದಿಕೊಂಡಿರುವ ಸರುವಿನಲ್ಲಿ ಅಡುಗೆಗಾಗಿ ಕಟ್ಟಿಗೆ ತರುತ್ತಿರುವ ವೇಳೆಯಲ್ಲಿ ಆರೋಪಿ ಮಹ್ಮದ್ ಅಲಿ ಅಲಿಯಾಸ್ ಮಕ್ಕಾಬುಲಾ ಕೋಲಕಾರ (57) ಲಕ್ಷ್ಮಿ ಮೇಲೆ ಲೈಂಗಿಕ ದೌರ್ಜನ್ಯ ಏಸಗಿ ಕೊಲೆ ಮಾಡಿ ಮೈಮೇಲೆ ಇದ್ದ 8 ಗ್ರಾಂ ಬಂಗಾರದ ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದನು.
ಈ ಘಟನೆಗೆ ಸಂಬಂಧಿಸಿದಂತೆ ಧಾರವಾಡ ಎಸ್.ಪಿ.ಕೃಷ್ಣಕಾಂತ ಅವರ ಮಾರ್ಗದರ್ಶನದಲ್ಲಿ ಧಾರವಾಡ ಗ್ರಾಮೀಣ ಡಿ.ಎಸ್.ಪಿ ನೇತೃತ್ವದಲ್ಲಿ ತನಿಖೆ ಕೈಗೊಂಡ ಕುಂದಗೋಳ ಪಿಐ ಎಮ್.ಎನ್.ದೇಶನೂರ ತಂಡ 24 ಗಂಟೆ ಒಳಗಾಗಿ ಕೊಲೆ ಆರೋಪಿ ಮಹಮ್ಮಅಲಿಯನ್ನು ಬಂಧಿಸಿದ್ದಾರೆ. ಇನ್ನೂ ಆರೋಪಿ ದೊಚ್ಚಿದ ಬಂಗಾರವನ್ನು ಜಪ್ತಿ ಮಾಡುವ ತನಿಖೆ ಪ್ರಗತಿಯಲ್ಲಿದ್ದು, ತನಿಖಾ ಕೆಲಸ ಮುಗಿದ ನಂತರ ಸದರಿ ಆಪಾದಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಎಸ್.ಪಿ ಕೃಷ್ಣಕಾಂತ ಇಂದು ಪತ್ರಿಕಾಗೋಷ್ಠಿ ತಿಳಿಸಿದ್ದಾರೆ.
ಪ್ರಕರಣವನ್ನು ಬೆನ್ನಟ್ಟಿ ಆರೋಪಿಯನ್ನು ಬಂಧಿಸಿರುವ ತಂಡದಲ್ಲಿ ಪೋಲಿಸ ಸಿಬ್ಬಂದಿಗಳಾದ ಎಎಸ್ ಐ ಬಿ.ಎಮ್.ಮಡಿವಾಳರ, ಎಚ್.ಸಿ ಯವರಾದ ಬಸವರಾಜ ಶೀರಕೋಳ, ಮಡಿವಾಳ ಜೋಡಗೇರಿ, ಚಂದ್ರು ಬಡಿಗೇರ, ಸಾವಿತ್ರಿ ಶಿಂತ್ರಿ, ಎ.ಎಮ್.ನವಲೂರ, ಆರೀಫ್ ಗೋಲಂದಾಜ್, ಎಲ್ಲಪ್ಪ ಸಂತಪ್ಪನವರ, ಎಮ್.ಆರ್.ಮಂಟೂರ, ಪಿಸಿ ನಾಗರಾಜ್ ಹೊಸಕೇರಿ, ಅಮರೇಶ ಬಳಗಾರ, ಸಯ್ಯದ್ ಕಲಾವಂತ, ರಮೇಶ ಪೂಜಾರ, ಹುಬ್ಬಳ್ಳಿ ಗ್ರಾಮೀಣ ಸಿಬ್ಬಂದಿಗಳಾದ ಕಾಂತೇಶ ಹಳ್ಳಿಕೇರಿ, ಚಾಲಕ ಡೇವಿಡ್ ಕರಬನ್ನವರ ಇದ್ದರು. ಈ ತನಿಖಾ ತಂಡಕ್ಕೆ ಬಹುಮಾನ ಘೋಷಿಸಲಾಗಿದೆ ಎಂದು ಎಸ್.ಪಿ ತಿಳಿಸಿದರು.