24 ಗಂಟೆಯಲ್ಲಿ “ಲಕ್ಷ-ಲಕ್ಷ” ಮೌಲ್ಯದ ‘ಚಿನ್ನ’ ಇನ್ಸ್ಪೆಕ್ಟರ್ “ರಾಘವೇಂದ್ರ” ಹಳ್ಳೂರ ಮಾಡಿದ್ದೇನು..!
ಹುಬ್ಬಳ್ಳಿ:ಕಸಬಾಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧನ
ಮಾಡಿ ಕಳ್ಳತನವಾಗಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಸೋಮವಾರ ನೇಕಾರ ನಗರದ ಆದರ್ಶ ಕಾಲೊನಿಯಲ್ಲಿರುವ ಈಶ್ವರ ಬೆನಾಳ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆ ಬಾಗಿಲು ಮುರಿದು 7 ಲಕ್ಷ ಬೆಲೆಬಾಳುವ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು.ಪ್ರಕರಣ ದಾಖಲು ಮಾಡಿಕೊಂಡು ತನಿಖೆಗೆ ಇಳಿದ ಕಸಬಾಪೇಟ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಆಂಡ್ ಟೀಂ ಹಳೇ ಹುಬ್ಬಳ್ಳಿಯ ಬೆಪಾರಿ ಫ್ಲ್ಯಾಟ್ ನಲ್ಲಿ ಖಚಿತ ಮಾಹಿತಿಯ ಮೇರೆಗೆ ಕಳ್ಳತನ ಮಾಡಿದ ಆರೋಪಿಯನ್ನು ಬಂಧನ ಮಾಡಿದ್ದಾರೆ.
ಸದ್ಯ ಬಂಧಿತ ಆರೋಪಿಯಿಂದ 183 ಗ್ರಾಂ ಮೌಲ್ಯದ 7,3,4000 ಮೌಲ್ಯದ ಚಿನ್ನಾಭರಣ ವಶಕ್ಕೇ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ,ಕಸಬಾಪೇಟ್ ಇನ್ಸ್ಪೆಕ್ಟರ್ ರಾಘವೇಂದ್ರ ಆಂಡ್ ಟೀಂ ಕಾರ್ಯಕ್ಕೆ ಅಪರಾಧ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.