ಹುಬ್ಬಳ್ಳಿ

“ರೌಡಿ ಶೀಟರ್” ಪರ ನಿಂತ ಕೇಂದ್ರ “ಸಚಿವ ಪ್ರಹ್ಲಾದ್ ಜೋಶಿ”..!? ಪೊಲೀಸರ ಪರ ನಿಂತ “ರಜತ್ ಉಳ್ಳಾಗಡ್ಡಿಮಠ”

Spread the love

ಹುಬ್ಬಳ್ಳಿ:ನಿನ್ನೇ ಹುಬ್ಬಳ್ಳಿಯ ಮಯೂರ ಎಸ್ಟೇಟ್’ನಲ್ಲಿನ ತಮ್ಮ ಸ್ವಗ್ರಹದಲ್ಲಿ ಕೆಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೌಡಿ ಶೀಟರ್ ಮುಂದೆಯೇ ಇನ್ಸ್ಪೆಕ್ಟರ್ ಗೆ ಆವಾಜ್ ಹಾಕಿದ ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಕೇಂದ್ರ ಮಂತ್ರಿ ನಡೆಗೆ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರವಾಡ ರೌಡಿ ಶೀಟರ್ ರವಿ ಎಂಬಾತ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಸ್ಪೀಟ್ ಅಡ್ಡೆ ನಡೆಸುತ್ತಿದ್ದ ಹೀಗಾಗಿ ಇನ್ಸ್ಪೆಕ್ಟರ್ ಕಾಡದೇವರಮಠ ರೌಡಿ ಶೀಟರ್ ನನ್ನು ಠಾಣೆಗೆ ಕರೆಯಿಸಿ ಪೊಲೀಸ್ ಭಾಷೆಯಲ್ಲಿಯೇ ಕಿವಿ ಹಿಂಡುವ ಕಾರ್ಯವನ್ನು ಮಾಡಿದ್ದರು. ಆದ್ರೆ ಈ ಕಿವಿ ಹಿಂಡಿದ ನೋವನ್ನು ತಾಳಲಾರದೆ ರೌಡಿ ಶೀಟರ್ ರವಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಂದೆ ಈ ವಿಚಾರವನ್ನು ಹೇಳಿದ್ದ.

ಹೀಗಾಗಿ ನಿನ್ನೇ ತಮ್ಮ ನಿವಾಸಕ್ಕೆ ಕಾಡದೇವರಮಠ ಅವರನ್ನು ಕರೆಸಿಕೊಂಡ ಕೇಂದ್ರ ಸಚಿವ ಜೋಶಿ ಸಾಹೇಬ್ರು ರೌಡಿ ಶೀಟರ್ ಮುಂದೆಯೇ ಇನ್ಸ್ಪೆಕ್ಟರ್ ಗೆ ಆವಾಜ್ ಹಾಕಿದ ವಿಡಿಯೋ ಬೆನ್ನಲ್ಲೇ ಸಚಿವರ ವರ್ತನೆಗೆ ರಜತ ಉಳ್ಳಾಗಡ್ಡಿಮಠ ಆಕ್ರೋಶ ಹೊರಹಾಕಿದ್ದಾರೆ.

ಕೇಂದ್ರ ಸಚಿವ ಕಾನೂನುಬಾಹಿರ ಕಾರ್ಯದಲ್ಲಿ ಭಾಗಿಯಾಗುವರ ಪರವಾಗಿ ನಿಲ್ಲೋದು ದುರಂತ,ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಬರುತ್ತಿರೋ ಹಿನ್ನೆಲೆಯಲ್ಲಿ ಈ ರೀತಿಯಾದ ಜನರನ್ನು ಓಲೈಸಲು ಈ ರೀತಿಯಾದ ನಾಟಕವನ್ನು ಮಾಡುತ್ತಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಒಟ್ಟಿನಲ್ಲಿ ಒಬ್ಬ ರಾಜಕಾರಣಿ ಆದವನಿಗೆ ತನ್ನದೇ ಆದಂತಹ ಕೆಲವೊಂದಿಷ್ಟು ಜಾವದ್ಬಾರಿಗಳು ಇರುತ್ತವೆ ಅವುಗಳನ್ನು ಯಾವಾಗ ಹೇಗೆ ನಿಭಾಯಿಸಬೇಕು ಅನ್ನೋದು ಅವರಿಗೆ ಗೊತ್ತಿರಬೇಕು, ಆದ್ರೆ ಇವೆಲ್ಲವನ್ನು ಮೀರಿ ಒಬ್ಬ ರಾಜಕಾರಣಿ ಆಗಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವರ ಪರವಾಗಿ ನಿಲ್ಲುವ ಮನೋಸ್ಥಿತಿ ಯಾಕೆ ಕೇಂದ್ರಸಚಿವರಿಗೆ ಬಂತೋ ಎಂಬ ಉತ್ತರವನ್ನು ದೇವರೇ ಕೊಡಬೇಕಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page