ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ “ಮಗನ ಸಾವಿನ” ನಡುವೆಯೂ ಸಾರ್ಥಕತೆ ಮೆರೆದ “ಪೊಲೀಸ್” ಅಧಿಕಾರಿ.

Spread the love

ಹುಬ್ಬಳ್ಳಿ:ಆತ ತನ್ನ ತಂದೆಗೆ ಮುದ್ದಿನ ಮಗ, ಮಗನಿಗೂ ಕೂಡಾ ತಂದೆ ಅಂದ್ರೆ ತುಂಬಾ ಪ್ರೀತಿ,ಇರೋ ಒಬ್ಬ ಮಗನನ್ನು ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಿ ಆತನನ್ನು ಒಳ್ಳೆಯ ಪೊಲೀಸ್ ಅಧಿಕಾರಿ ಮಾಡಬೇಕು ಅಂತಾ ಕನಸ್ಸು ಕಂಡಿದ್ದ ಹಾಗೆಯೇ ತಂದೆಯ ಕನಸನ್ನು ನನಸು ಮಾಡಲು ಮಗ ಹಗಲು ರಾತ್ರಿ ಶ್ರಮಿಸುತ್ತಿದ್ದ ಆದ್ರೆ ವಿಧಿಯಾಟ ಮಗನ ಬದುಕಲ್ಲಿ ಆಡಿದ ಆಟಕ್ಕೆ ತಂದೆಯ ಕನಸಿಗೆ ಬರ ಸಿಡಿಲು ಬಡಿದಿದ್ದು ತಂದೆ ಕಂಡ ಕನಸು ಕನಸಾಗಿಯೇ ಉಳಿದುಬಿಟ್ಟಿದೆ.

ಹೀಗೆ ಫೋಟೋದಲ್ಲಿ ಹೀರೋ ತರಾ ಕಾಣುತ್ತಿರೋ ಈತನ ಹೆಸರು ಬಸವರಾಜ ಭಜಂತ್ರಿ ವಯಸ್ಸು 22 ಹುಬ್ಬಳ್ಳಿಯ ಪೊಲೀಸ್ ಕ್ವಾಟರ್ಸ್ ನ ನಿವಾಸಿ,ಈತನ ತಂದೆ ಯಲ್ಲಪ್ಪ ಅಂತಾ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಈ ಸುಖಿ ಕುಟುಂಬದಲ್ಲಿ ಬುಧವಾರ ಸಂಭವಿಸಿದ ಆ ಒಂದು ಅಪಘಾತ ಮನೆಯ ನಂದಾದೀಪವನ್ನೇ ಆರಿಸಿ ಬಿಟ್ಟಿದೆ.

ಕಳೆದ ಎರಡು ದಿನಗಳ ಹಿಂದೆ ತನ್ನ ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆ ಹೊಸಪೇಟೆಗೆ ತನ್ನ ಸ್ನೇಹಿತನ ಜೊತೆ ಹೋಗಿ ಮದುವೆ ಮುಗಿಸಿಕೊಂಡು ಮರಳಿ ಹುಬ್ಬಳ್ಳಿಯತ್ತ ಬರೋವಾಗ ಕೊಪ್ಪಳ ಬಳಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದ.

ಆದ್ರೆ ತನ್ನ ಪ್ರೀತಿಯ ಮಗನ ದುರಂತ ಸಾವು ಕಣ್ಣಾರೆ ಕಂಡ ತಂದೆ ಮಾತ್ರ ತನ್ನ ಎದೆಯಾಳದ ನೋವಿನಲ್ಲೂ ಕೂಡಾ ತನ್ನ ಮಗನ ಅಂಗಾಂಗಗಳನ್ನು ದಾನ ಮಾಡುವುದರು ಮೂಲಕ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು,ಇಡೀ ಸಮಾಜವೇ ತಂದೆಯ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸದ್ಯ ಮೃತಪಟ್ಟ ಬಸವರಾಜ ದೇಹದಿಂದ ಜೀವಂತ ಅಂಗಾಂಗಳಾದ ಲೀವರ್, ಕಿಡ್ನಿ,ಕಣ್ಣು ಸೇರಿದಂತೆ ವಿವಿಧ ಅಂಗಾಂಗಗಳನ್ನು ಬೆಂಗಳೂರು,ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ರವಾನೆ ಮಾಡಿ ಒಟ್ಟು ನಾಲ್ಕು ಜನರಲ್ಲಿ ಬದುಕಲ್ಲಿ ಬಸವರಾಜ ಬೆಳಕಾಗಿದ್ದಾನೆ.

ಒಟ್ಟಿನಲ್ಲಿ ಅಪಘಾತ ಎಂಬ ಹೆಸರಲ್ಲಿ ಜವರಾಯ ಆಡಿದ ಆಟಕ್ಕೆ ದುರಂತ ಅಂತ್ಯ ಕಂಡು ಸಾವಿನಲ್ಲೂ ಸಾರ್ಥಕತೆ ಮೆರೆದ ಬಸವರಾಜ ಭಜಂತ್ರಿ ನಿಜಕ್ಕೂ ಸಮಾಜಕ್ಕೆ ಮಾದರಿ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page