ಹುಬ್ಬಳ್ಳಿಯಲ್ಲಿ ಕರ್ತವ್ಯ ನಿರತ “PSI ಸಮವಸ್ತ್ರ” ಎಳೆದಾಡಿ “ಜೀವ” ಬೆದರಿಕೆ…ಶಹರ ಪೊಲೀಸ್ ಠಾಣೆಯಲ್ಲಿ FIR
ಹುಬ್ಬಳ್ಳಿ:ನಗರದಲ್ಲಿನ ಸಂಚಾರಿ ಪೊಲೀಸರಿಗೆ ಪ್ರತಿದಿನವೂ ಇಂತಿಷ್ಟು ಕೇಸ್ ಮಾಡಬೇಕು ಎಂಬ ಟಾರ್ಗೆಟ್ ನ್ನು ಅಧಿಕಾರಿಗಳು ನೀಡಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು ನಿನ್ನೇ PSI ಒಬ್ಬರಿಗೆ ಬೈಕ್ ಸವಾರ ನಡುರಸ್ತೆಯಲ್ಲಿಯೇ ಸಮವಸ್ತ್ರ ಎಳೆದಾಡಿ ಧಮ್ಕಿ ಹಾಕಿದ ಘಟನೆ ನಡೆದಿದೆ.
ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಠಾಣೆಯ PSI ರಮಜಾನ ನದಾಫ್ ಬ್ರಾಡ್ವೇ ಬಳಿಯ ಕಲಾದಗಿ ಓಣಿಯ ಬಳಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವ ಸವಾರರಿಗೆ ದಂಡ ಹಾಕುವ ಕಾರ್ಯವನ್ನು ಮಾಡುತ್ತಿದ್ದಾಗ,ಓಲಾ ಬೈಕ್ ನಲ್ಲಿ ಹೆಲ್ಮೆಟ್ ಹಾಕದೆ ಅತಿಜೋರಾಗಿ ಬರುತ್ತಿದ್ದಾಗ PSI ರಮಜಾನ ಬೈಕ್ ನಿಲ್ಲಿಸಿ ಯಾಕೆ ಹೆಲ್ಮೆಟ್ ಹಾಕಿಲ್ಲ ಸಂಚಾರಿ ನಿಯಮ ಉಲ್ಲಂಘನೆ ಯಾಕೆ ಮಾಡ್ತೀರಾ ಅಂತಾ ಕೇಳಿದ್ದಾರೆ.
ಇದರಿಂದ ರೊಚ್ಚಿಗೆದ್ದ ಬೈಕ್ ಸವಾರ ಮಂಜುನಾಥ ಕಾಟಿಗರ ನೀನೇನು ಕೇಳ್ತಿಯಾ ಮಗನೇ ಅದನ್ನಾ ಸಿಟಿಯಲ್ಲಿ ಯಾರಾದ್ರೂ ಹೆಲ್ಮೆಟ್ ಹಾಕ್ತಾರಾ ಎಂದು ಆವಾಜ್ ಹಾಕಿದ್ದಲ್ಲದೆ PSI ಸಮವಸ್ತ್ರ ಹಿಡಿದು ನಡು ರಸ್ತೆಯಲ್ಲಿಯೇ ಎಳೆದಾಡಿ ಜೀವ ಬೆದರಿಕೆ ಹಾಕಿದ್ದಾನೆ. ಈ ಕುರಿತು PSI ರಮಜಾನ ಶಹರ ಪೊಲೀಸ್ ಠಾಣೆಯಲ್ಲಿ ಮಂಜುನಾಥ ಕಾಟಗರ ಮೇಲೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಆರೋಪಿ ಮಂಜುನಾಥ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.
ಈ ನಡುವೆ ಹಿರಿಯ ಅಧಿಕಾರಿಗಳು ಎಸಿ ರೂಮ್ ನಲ್ಲಿ ಕೂತು ವೈರಲೇಸ್ ಮುಖಾಂತರ ಇಷ್ಟು ಕೇಸ್ ಗಳನ್ನು ಮಾಡಿಯೇ ಊಟಕ್ಕೆ ಹೋಗಬೇಕು ಅನ್ನೋ ಆದೇಶಗಳನ್ನು ಮಾಡೋದು ಬಿಟ್ಟರೆ, ಸಿಬ್ಬಂದಿಗಳ ಕಷ್ಟ ಸುಖಗಳನ್ನು ಕೇಳುವ ಮನಸ್ಥಿತಿಯ ಅಧಿಕಾರಿಗಳು ಇಲ್ಲವೇ ಎಂಬ ಪರಿಸ್ಥಿತಿ ಹು-ಧಾ ಪೊಲೀಸ್ ಕಮಿಷನರೇಟ್ ನಲ್ಲಿ ನಿರ್ಮಾಣವಾಗಿದೆ