ಕೇಶ್ವಾಪುರ ಠಾಣೆಯ “ಇನ್ಸ್ಪೆಕ್ಟರ್ ಸಾತೇನಹಳ್ಳಿ” ಹೆಸರು ಕೆಡಿಸಲು “ಪ್ಲ್ಯಾನ್” ಮಾಡಿದ್ದ್ಯಾರು ಗೊತ್ತಾ..!?
ಹುಬ್ಬಳ್ಳಿ:ನಗರದಲ್ಲಿ ನಡೆದಿದ್ದ ಯುವಕನ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರ ಕಿರುಕುಳ ಎಂಬ ಮಾತುಗಳು ಕೇಳಿ ಬಂದಿದ್ದು ಕಿರುಕುಳದ ಆರೋಪ ಸತ್ಯಕ್ಕೆ ದೂರವಾಗಿದ್ದು ಎಂಬುದನ್ನು ಠಾಣೆಯ ಸಿಸಿ ಕ್ಯಾಮರಾಗಳು ಸಾರಿ ಸಾರಿ ಹೇಳುತ್ತಿದ್ದು.ಇದರ ಹಿಂದೆ ಇನ್ಸ್ಪೆಕ್ಟರ್ ಸಾತೇನಹಳ್ಳಿ ಅವರ ಹೆಸರು ಕೆಡಿಸಲು ಹುನ್ನಾರು ನಡೆಸಿದ್ದು ಬಹಳ ಸ್ಪಷ್ಟವಾಗಿ ಕಂಡುಬರುತ್ತಿದೆ.
ಕೋಟಿಲಿಂಗೇಶ್ವರ ನಗರದ ನಿಖಿಲ್ ಹಾಗೂ ಕೇಶ್ವಾಪುರ ಮೂಲದ ಪ್ರೀತಿಯ ಮದುವೆ 9 ತಿಂಗಳ ಹಿಂದೆ ಎಲ್ಲ ಬಂದು ಬಳಗಗಳ ಸೇರಿ ಅದ್ದೂರಿಯಾಗಿ ಕೊಡುವದೆಲ್ಲವನ್ನು ಕೊಟ್ಟು ಮದುವೆ ಮಾಡಿದರು ಕೂಡಾ,ದಂಪತಿಗಳ ನಡುವೆ ಮನಸ್ತಾಪ ಬಂದು ಕೇಶ್ವಾಪುರ ಠಾಣೆಯ ಮೆಟ್ಟಿಲನ್ನು ಏರಿದ್ದರು.
ಅದೇ ರೀತಿ ಠಾಣೆಯಲ್ಲಿ ಎರಡು ಕುಟುಂಬದವರು ನಮ್ಮ ಸಮಸ್ಯೆಗಳನ್ನು ನಾವೇ ನಾವೇ ಬಗೆಹರಿಸಿಕೊಳ್ಳುತ್ತೇವೆ ಅಂತಾ ಒಪ್ಪಿಕೊಂಡು ಬಂದ ನಂತರದಲ್ಲಿ ನಿಖಿಲ್ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದ ಆದ್ರೆ ಆತ್ಮಹತ್ಯೆ ಮಾಡಿಕೊಂಡ ನಿಖಿಲ್ ಎಲ್ಲಿಯೂ ಕೂಡಾ ಪೊಲೀಸರ ಕಿರುಕುಳದ ಬಗ್ಗೆ ಮಾತು ಹಾಗೂ ಡೆತ್ ನೋಟ್ ಕೂಡಾ ಬರೆದು ಇಟ್ಟಿಲ್ಲ.ಆದ್ರೆ ಕೆಲವೊಂದಿಷ್ಟು ಜನ ಇದನ್ನೇ ಮುಂದಿಟ್ಟುಕೊಂಡು ಇನ್ಸ್ಪೆಕ್ಟರ್ ಸಾತೇನಹಳ್ಳಿ ಹೆಸರನ್ನು ಕೆಡಿಸಲು ಮುಂದಾಗಿ ಪೊಲೀಸರು ಕಿರುಕುಳ ಕೊಟ್ಟಿದ್ದಾರೆ ಎಂಬ ಬಿಳಿ ಬಣ್ಣದ ಕಾಗೆಯನ್ನು ಹಾರಿಸಿದ್ದರು.
ಹಾಗೆಯೇ ಬಿಳಿ ಬಣ್ಣದ ಕಾಗೆಯನ್ನು ಕಂಡಿದ್ದೆ ತಡ ಬಿಳಿ ಬಣ್ಣದ ಕಾಗೆಯನ್ನು ನೋಡಿರದ ಕೆಲವರು ಇನ್ಸ್ಪೆಕ್ಟರ್ ಮೇಲೆ ಆರೋಪಗಳ ಮೇಲೆ ಆರೋಪವನ್ನು ಮಾಡಿ ಅವರ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಿದರು, ಆದ್ರೆ ಈ ನಡುವೆ ಠಾಣೆಯಲ್ಲಿ ನಡೆದ ಘಟನೆಗಳು ಸಿಸಿ ಕ್ಯಾಮರಾದಲ್ಲಿ ದೃಶ್ಯಗಳಲ್ಲಿ ಸೆರೆಯಾಗಿದ್ದು ಅದರಲ್ಲಿ ಯಾರು ಏನು ಮಾಡಿದರೂ ಎಂಬ ಪ್ರಶ್ನೆಗೆ ಉತ್ತರ ಅದರಲ್ಲೇ ಅಡುಗಿದೆ.