“ಪೊಲೀಸರ್” ಕಿರುಕುಳದಿಂದ “ಯುವಕ ಆತ್ಮಹತ್ಯೆ” ಮಾಡಿಕೊಂಡಿಲ್ಲ “ಕಮೀಷನರ್” ರೇಣುಕಾ ಸುಕುಮಾರ..!
ಹುಬ್ಬಳ್ಳಿ: ನಗರದಲ್ಲಿ ನಡೆದಿದ್ದ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಸ್ಪಷ್ಟ ಪಡಿಸಿದ್ದಾರೆ.
ಕೋಟಿಲಿಂಗೇಶ್ವರ ನಗರದ ನಿಖಿಲ್ ಹಾಗೂ ಕೇಶ್ವಾಪುರದ ಪ್ರೀತಿ ಯ ವಿವಾಹ ಕಳೆದ 9 ತಿಂಗಳ ಹಿಂದೆ ನಡೆದಿತ್ತು ಆದ್ರೆ ಈ ನಡುವೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದ ಪರಿಣಾಮ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಿದ್ದರು.ಪೊಲೀಸ್ ಠಾಣೆಯಲ್ಲಿ ಕೂಡಾ ಇಬ್ಬರು ನಮ್ಮಲ್ಲಿಯೇ ನಾವು ಈ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಅಂತಾ ಪೊಲೀಸರ ಬಳಿ ಎರಡು ಕಡೆಯವರು ಪತ್ರವನ್ನು ಬರೆದು ತಮ್ಮ ತಮ್ಮ ಮನೆಗಳಿಗೆ ಹೋಗಿದ್ದರು.
ಆದ್ರೆ ಇಂದು ಬೆಳಗಿನ ಜಾವ ನಿಖಿಲ್ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ,ಇದರ ಬಗ್ಗೆ ಆತನ ಪೋಷಕರು ಪೊಲೀಸರ ಟಾರ್ಚರ್ ನಿಂದ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಆರೋಪ ಮಾಡಿದ್ದರು,ಆದ್ರೆ ಈ ಆರೋಪಕ್ಕೆ ಇದೀಗ ಪೊಲೀಸ್ ಕಮೀಷನರ್ ಈ ಆರೋಪ ಸುಳ್ಳು ಅಂತಾ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಈ ಪ್ರಕರಣದ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಈ ನಡುವೆ ಜನಸ್ನೇಹಿ ಎಂಬ ಮಾತಿನಂತೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರು ಕೂಡ ಇದೀಗ ಪೊಲೀಸರ ಮೇಲೆ ಈ ರೀತಿಯಾದ ಆರೋಪಗಳು ಬರುತ್ತಿದೆ.ವಿಚಾರಣೆಗೆ ನೋಟಿಸ್ ನೀಡಿ ಠಾಣೆಗೆ ಕರೆಯಿಸಿದರೆ ದುಡ್ಡು ಕೇಳುತ್ತಿದ್ದಾರೆ ಎಂಬ ಆರೋಪ,ಇನ್ನು ಆರೋಪ ಬಂದ ವ್ಯಕ್ತಿಗಳನ್ನು ಠಾಣೆಗೆ ಕರೆಯಿಸದೇ ಹೋದಲ್ಲಿ ಆರೋಪಿಗಳಿಂದ ದುಡ್ಡು ತಿಂದಿದ್ದಾರೆ ಎಂಬ ಆರೋಪವನ್ನು ಎದುರಿಸುವ ಪರಿಸ್ಥಿತಿ ಇದೀಗ ಪೊಲೀಸರಿಗೆ ಬಂದಿದ್ದು ಸಮಾಜದಲ್ಲಿ ಇದೀಗ ಪೊಲೀಸಿಂಗ್ ಹೇಗೆ ಮಾಡಬೇಕು ಅಂತಾ ಪೊಲೀಸರು ಯೋಚನೆ ಮಾಡುವಂತಾಗಿದೆ