ಹುಬ್ಬಳ್ಳಿಯಲ್ಲಿ “8” ವರ್ಷದ “ಬಾಲಕನನ್ನು” ಕಲ್ಲಿನಿಂದ “ಜಜ್ಜಿ ಭೀಕರ ಕೊಲೆ”
ಹುಬ್ಬಳ್ಳಿ:ನಗರದ ಮಿಲ್ಲತ್ತ ನಗರದ ಬಳಿ ಇರುವ ದೊಡ್ಡಮನಿ ಆಟದ ಮೈದಾನದಲ್ಲಿ 8 ವರ್ಷದ ನದೀಮ್ ಎಂಬ ಬಾಲಕನನ್ನು ಕಲ್ಲುಗಳಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿ ಶವವನ್ನು ಬೀಸಾಡಿ ಹೋಗಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕೊಲೆಯಾದ ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ ರಾಜೀವ್ ಎಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಬಂದಿಸಿದಂತೆ ಈಗಾಗಲೇ ಪೋಷಕರಿಂದ ಮಾಹಿತಿಯನ್ನು ಪಡೆದಿದ್ದು ಬಾಲಕ ನಿನ್ನೇ ಸಾಯಂಕಾಲದಿಂದ ಮನೆಯಿಂದ ನಾಪತ್ತೆಯಾಗಿದ್ದ ಎಂಬ ಮಾಹಿತಿ ಸಿಕ್ಕಿತ್ತು ಸದ್ಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಕೊಲೆ ಮಾಡಿ ಪರಾರಿಯಾಗಿರುವ ಹಂತಕರನ್ನು ಆದಷ್ಟು ಬೇಗ ಪತ್ತೆ ಹಚ್ಚಲಾಗುವುದು ಎಂದು ಡಿಸಿಪಿ ರಾಜೀವ್ ಎಂ ಪ್ರತಿಕ್ರಿಯೆ ನೀಡಿದ್ದಾರೆ