“ಮಂಜುನಾಥ”ನ ಕೃಪಾಕಟಾಕ್ಷ “ಅಧಿಕಾರಿಗಳ” ಕೈ ಸೇರಿತೇ “ಪ್ರಸಾದ”ದ ರೂಪದಲ್ಲಿ “1.5”ಲಕ್ಷ ಅಡ್ವಾನ್ಸ್..!
ಹುಬ್ಬಳ್ಳಿ:ನಗರದಲ್ಲಿ ಕ್ಲಬ್ ನಲ್ಲಿ ನಡೆಯುತ್ತಿರೋ ಅಕ್ರಮಗಳಿಗೆ ಕಡಿವಾಣ ಹಾಕಬೇಕಾದ ಇಲಾಖೆಯ ಅಧಿಕಾರಿಗಳೆ ಕ್ಲಬ್ ನವರ ಜೊತೆ ಸಂಧಾನ ಮಾಡಿಕೊಂಡು. ಅಕ್ರಮಳಿಗೆ ಕಡಿವಾಣ ಹಾಕದೆ ಸಲೀಸಾಗಿ ಅಕ್ರಮವನ್ನು ಸಕ್ರಮವನ್ನಾಗಿ ಮಾಡಲು ದಕ್ಷಿಣೆ ರೂಪದಲ್ಲಿ ಮಂಜುನಾಥ ಮುಖಾಂತರ ಅಧಿಕಾರಿಗಳ ಕೈಗೆ ಪ್ರಸಾದ ಬಂದು ಸೇರಿದೆ.
ನಗರದ ಸರ್ವ’ಉದಯದಿಂದ ಪ್ರಾರಂಭವಾದ ಕ್ಲಬ್ ಗಳು ಪ್ರೀತಿಯ ವರೆಗೂ ಪ್ರೀತಿಯಿಂದ ಬಂದು ನಿಂತಿದ್ದು ನಡುವೆ ದನಿವಾದಾಗ ರಮೇಶನ ಬಳಿ ಟಿಫನ್ ಆವಾಗ ಆವಾಗ ಮಾಡಲಾಗಿದೆ ಅಂತೆ. ಅದಕ್ಕೆಂದೇ ಅಡ್ವಾನ್ಸ್ ಆಗಿ ಒಂದೂವರೆ ಲಕ್ಷ ಪಡೆದು ಪ್ರತಿ ತಿಂಗಳು ಐವತ್ತು ಸಾವಿರ ರೂಪಾಯಿ ಅಧಿಕಾರಿಗಳ ಕೈಗೆ ತಲುಪುವಂತೆ ಮಂಜುನಾಥ ನೋಡಿಕೊಳ್ಳುತ್ತಿದ್ದಾನಂತೆ.
ಮಂಜುನಾಥನ ಜೊತೆ ಇನ್ನೊಬ್ಬ ಸಿಬ್ಬಂದಿ ಸೇರಿಕೊಂಡು ಈ ಡೀಲ್ ಕುದುರಿಸಿದ್ದಾರೆ ಆದ್ರೆ ಹಿರಿಯ ಅಧಿಕಾರಿಗಳಿಗೆ ಇನ್ನೊಬ್ಬ ಸಿಬ್ಬಂದಿ ಇದರಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿಲ್ಲ,ಒಂದು ವೇಳೆ ಗೊತ್ತಾದ್ರೆ ಅಧಿಕಾರಿ ಆ ಹಣವನ್ನು ಕೂಡಾ ಪಡೆಯುವದಿಲ್ಲ ಯಾಕಂದ್ರೆ ಅವರಿಬ್ಬರ ನಡುವೆ ಅಷ್ಟಕಷ್ಟೇ.ಇಷ್ಟೆಲ್ಲ ಕಣ್ಣ ಮುಂದೆ ನಡೆಯುತ್ತಿದ್ದರೂ ಕೆಲವು ಕ್ರೈಂ ಸಿಬ್ಬಂದಿಗಳಿಗೆ ಕ್ಲಬ್ ನಲ್ಲಿ ನಡೆಯುತ್ತಿರೋ ಅಕ್ರಮಗಳ ಬಗ್ಗೆ ಮಾಹಿತಿ ಇಲ್ಲದೆ ಇರೋದು ಸೋಜಿಗದ ಸಂಗತಿಯಾಗಿದೆ