ಗೋಕುಲ್ ರಸ್ತೆಯಲ್ಲಿ “ಬಲ” ಭೀಮನಾದ “ಹೆಡ್ ಕಾನ್ಸ್ಟೇಬಲ್” ಕಲ್ಮೇಶ ಕಮ್ಮಾರ.!
ಹುಬ್ಬಳ್ಳಿ:ನಮಗೆಲ್ಲ ಸಂಚಾರಿ ಪೊಲೀಸರು ಅಂದ್ರೆ ಸಾಕು ರಸ್ತೆ ಬದಿಯಲ್ಲಿ ಕೈಯಲ್ಲಿ ಮಷೀನ್ ಹಿಡ್ಕೊಂಡು ದಂಡ ಹಾಕ್ತಾರೆ ಅಂತಾ ಎಲ್ಲರೂ ಕೂಡಾ ಅನ್ನಕೊಳ್ಳುತ್ತಾರೆ ಆದ್ರೆ ಪೊಲೀಸರಲ್ಲಿ ಕೂಡಾ ಕೆಲವೊಂದಿಷ್ಟು ಮಾನವಿಯತೆಗೆ ಮಿಡಿಯುವ ಹೃದಯಗಳು ಇರುತ್ತವೆ ಎಂಬುದಕ್ಕೆ ಕೆಲವೊಂದಿಷ್ಟು ದೃಶ್ಯಗಳು ಸಾಕ್ಷಿಯಾಗುತ್ತವೆ.
ಇಂದು ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿನ ಮಾಪಸಾಲ ಡಿಪೋ ಬಳಿ ನಡು ರಸ್ತೆಯಲ್ಲಿಯೇ ಕಾರೊಂದು ಕೆಟ್ಟು ನಿಂತ ಪರಿಣಾಮ ಕಾರಿನಲ್ಲಿದ್ದ ಹೆಂಡತಿ ಇಳಿದು ಕಾರನ್ನು ತಳ್ಳಲು ಹೋದ್ರು ಕೂಡಾ ಕಾರು ಮುಂದೆ ಹೋಗಿಲ್ಲ,ಕೂಡಲೇ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಉತ್ತರ ಸಂಚಾರಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಕಲ್ಮೇಶ ಕಮ್ಮಾರ ಈ ದೃಶ್ಯವನ್ನು ನೋಡಿ ಕರ್ತವ್ಯ ನಿರ್ವಹಿಸುತ್ತಲೇ ಕಾರನ್ನು ತಳ್ಳಿ ದಂಪತಿಗಳಿಗೆ ಸಹಾಯ ಮಾಡಿದ್ದಾರೆ.
ಕೇವಲ ಟ್ರಾಫಿಕ್ ಪೊಲೀಸರು ಅಂದ್ರೆ ಸಾಕು ಯಾವುದೇ ಮನುಷ್ಯತ್ವ ಇಲ್ಲದೆ ಸಾರ್ವಜನಿಕರಿಂದ ಹಣ ಪೀಕುತ್ತಾರೆ ಎಂಬ ಮಾತುಗಳು ಸಾರ್ವಜನಿಕರಲ್ಲಿ ಮನೆ ಮಾಡಿರುವಾಗ ಟ್ರಾಫಿಕ್ ಪೊಲೀಸರಲ್ಲಿ ಕೂಡಾ ಮಾನವಿಯತೆಯ ಗುಣವಿದೆ ಅನ್ನೋದನ್ನಾ ತೋರಿಸಲು ಇಂತಹ ದೃಶ್ಯಗಳೇ ಸಾಕ್ಷಿ.