“ಬೈರಿದೇವರಕೊಪ್ಪದ ದರ್ಗಾ” ತೆರವು ಕಾರ್ಯಾಚರಣೆ ಆರಂಭ ಸುತ್ತ ಮುತ್ತ “ಖಾಕಿ ಹೈ ಅಲರ್ಟ್”
ಹುಬ್ಬಳ್ಳಿ:ಇತಿಹಾಸ ಪ್ರಸಿದ್ಧ ಬೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಚರಣೆಯನ್ನು ಜಿಲ್ಲಾಡಳಿತ ಹಾಗೂ ಬಿ ಆರ್ ಟಿ ಎಸ್,ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಬೆಳ್ಳಿಗ್ಗೆ 6.30 ರಿಂದ ಪ್ರಾರಂಭವಾಗಿದೆ.
ಕಾರ್ಯಚರಣೆ ಯಾರಿಗೂ ಕಾಣದಂತೆ ದರ್ಗಾ ಸುತ್ತಲೂ ತಗಡುಗಳನ್ನು ಹಾಕಲಾಗಿದ್ದು ದರ್ಗಾ ತೆರವು ಕಾರ್ಯಾಚರಣೆ ಯಾರಿಗೂ ಕಾಣದಂತೆ ವ್ಯವಸ್ಥೆ ಮಾಡಲಾಗಿದ್ದು ಕಾರ್ಯಾಚರಣೆಗೆ ಎರಡು ಜೆಸಿಬಿ ,ಟ್ರ್ಯಾಕ್ಟರ್ ಹಾಗೂ ಪೌರ ಕಾರ್ಮಿಕರು ಸೇರಿದಂತೆ,ಅಂತರಜಿಲ್ಲಾ ಪೊಲೀಸರು ಸೇರಿದಂತೆ,ದರ್ಗಾ ಸುತ್ತಲು ಕೂಡಾ ಶಸ್ತ್ರ ಸಜ್ಜಿತರಾದ ಆರ್ ಎ ಎಫ್ ವಿಶೇಷ ಪೊಲೀಸ್ ತುಕಡಿಯನ್ನು ಕೂಡಾ ನಿಯೋಜನೆ ಮಾಡಲಾಗಿದೆ.
ಅಷ್ಟೇ ಅಲ್ಲದೆ ಈ ಮಾರ್ಗದಲ್ಲಿ ಓಡಾಡುವ ವಾಹನಗಳ ಮಾರ್ಗ ಬದಲಾವಣೆಯನ್ನು ಮಾಡಲಾಗಿದ್ದು ಧಾರವಾಡ ಕಡೆಯಿಂದ ಹುಬಳ್ಳಿಯತ್ತ ಬರುವ ವಾಹನಗಳನ್ನು ಎಪಿಎಂಸಿ ಮುಖಾಂತರ ಹುಬ್ಬಳ್ಳಿಯತ್ತ ಹಾಗೂ ಹುಬ್ಬಳ್ಳಿಯಿಂದ ಧಾರವಾಡ ಕಡೆ ಹೋಗುವ ವಾಹನಗಳನ್ನು ಬೈರಿದೇವರಕೊಪ್ಪದಿಂದ ಗಾಮನಗಟ್ಟಿ ಮಾರ್ಗವಾಗಿ ಧಾರವಾಡ ಹೋಗಲು ಮಾರ್ಗ ವ್ಯವಸ್ಥೆಯನ್ನು ಮಾಡಿದ್ದು.
ಅಷ್ಟೇ ಅಲ್ಲದೇ ಯಾವುದೇ ರೀತಿಯಾದ ಅಹಿತಕರ ಘಟನೆ ನಡೆಯದಂತೆ ನಗರದ ಪ್ರಮುಖ ಪ್ರದೇಶಗಳಲ್ಲಿ ಖಾಕಿ ಪಡೆ ಕೂಡಾ ಹೈ ಅಲರ್ಟ್ ಆಗಿದೆ.