ಹುಬ್ಬಳ್ಳಿ

ತುಂಬಿದ ಸಭೆಯಲ್ಲಿಯೇ “ನಾಲಿಗೆ” ಕೊಯ್ದುಕೊಳ್ಳುತ್ತೇನೆ ಎಂದ “ಜೆಡಿಎಸ್” ಅಭ್ಯರ್ಥಿ ಹಜರತ್ ಜೋಡಮನಿ

Spread the love

ಕುಂದಗೋಳ : ಮತಕ್ಷೇತ್ರದೇಲ್ಲೇಡೆ 2023ರ ಚುನಾವಣೆ ಕಣ ರಂಗೇರಿದೆ, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಸಹ ಚುನಾವಣೆ ಪೂರ್ವ ತಯಾರಿ ನಡೆಸಿದೆ.

ಅದರಂತೆ ಇಂದು ಹುಬ್ಬಳ್ಳಿಯ ಖಾಸಗಿ ಹೊಟೇಲ್’ನಲ್ಲಿ ನಡೆದ ಜೆಡಿಎಸ್ ಪಂಚರತ್ನ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕುಂದಗೋಳ ಮತಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಹಜರತ್’ಅಲಿ ಜೋಡಮನಿ ಮಾತನಾಡಿ ಚುನಾವಣೆ ಸಂದರ್ಭ ಜೆಡಿಎಸ್ ಪಕ್ಷ ಅಭ್ಯರ್ಥಿ ಬುಕ್ ಆಗ್ತಾರೆ ಎಂಬ ಉಹಾಪೋಹ ಸುಳ್ಳು ಎಂದು ಹರಡಿದ ವದಂತಿಗೆಗಳಿಗೆ ತೆರೆ ಎಳೆದಿದ್ದಾರೆ.

ಇದೆಲ್ಲದೇ ನಮಗೆ ಯಾವುದೇ ಪಕ್ಷದಿಂದ ಯಾರಿಂದಲೂ ಏನು ಬೇಕಾಗಿಲ್ಲಾ. ಇದುವರೆಗೆ ನಾನು ಕ್ಷೇತ್ರಕ್ಕಾಗಿ ದುಡಿದಿದ್ದೇನೆ, ಹಸಿದಾಗ ಬಡವರ ಮನೆಯಲ್ಲಿ ಕೇಳಿ ಒಂದು ರೊಟ್ಟಿ ತಿಂದಿದ್ದೇನೆ, ಆದರೆ ಯಾರಿಂದಲೂ ಒಂದು ರೂಪಾಯಿ ಕೈ ಚಾಚಿಲ್ಲಾ ಹಣಕ್ಕೆ ಆಸೆ ಪಟ್ಟಿಲ್ಲಾ ಎಂದು ನಾನು ನನ್ನ ನಾಲಿಗೆ ಕೊಯ್ದುಕೊಳ್ಳಲು ಸಿದ್ಧ ಎಂದರು.

ಮಾರ್ಚ್ ತಿಂಗಳಲ್ಲಿ ಕುಂದಗೋಳ ಮತಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಬರಲಿದೆ ಅದನ್ನು ಯಶಸ್ವಿ ಮಾಡುವುದೇ ನಮ್ಮೆಲ್ಲರ ಗುರಿ ಎಂದರು.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page