Uncategorizedನಮ್ಮೂರುಹುಬ್ಬಳ್ಳಿ- ಧಾರವಾಡ
ಧಾರವಾಡದಲ್ಲಿ ಕಸದ ಜಾಗದಲ್ಲಿ ಗಮನ ಸೆಳೆದ ರಂಗೋಲಿ : ಪೌರಕಾರ್ಮಿಕರ ಕಾರ್ಯಕ್ಕೆ ಮೆಚ್ಚುಗೆ..
ಧಾರವಾಡ, ಜ.22: ಹುಬ್ಬಳ್ಳಿ-ಧಾರವಾಡ ಅವಳಿನಗರವನ್ನು ಸ್ವಚ್ಛಗೊಳಿಸುವ ದೃಷ್ಠಿಯಿಂದ
ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಕಸದ ಜಾಗಗಳನ್ನು ಸ್ವಚ್ಛಗೊಳಿಸಿ ಆ ಜಾಗಗಳಲ್ಲಿ ಗಮನ ಸೆಳೆಯುವ ರಂಗೋಲಿಯನ್ನು
ಬಿಡಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಧಾರವಾಡದ ಮಾಳಮಡ್ಡಿಯ ವೆಂಕಟೇಶ್ವರ
ದೇವಸ್ಥಾನದ ಹತ್ತಿರದ ಬಯಲು ಜಾಗೆಯಲ್ಲಿ ಎಸೆಯಲಾಗಿದ್ದ ಕಸವನ್ನು ತೆರವುಗೊಳಿಸಿ ಪಾಲಿಕೆಯ ವಲೆಯ ಕಛೇರಿ ವತಿಯಿಂದ ಕಸ ಎಸೆಯದಂತೆ ಜಾಗೃತಿ ಮೂಡಿಸಲಾಯಿತು.
ಎಲ್ಲೆಂದರೆಲ್ಲಿ ಸಾರ್ವಜನಿಕರು ಕಸ ಎಸೆಯದಂತೆ ಜಾಗೃತಿ ಮೂಡಿಸುವುದರ ಜೊತೆಗೆ ಸ್ವಚ್ಛತೆಯಿಂದ ಉತ್ತಮ ಪರಿಸರ ಸಾಧ್ಯ ಎಂಬುವುದನ್ನು ಇಂದು
ಬೆಳ್ಳಗ್ಗೆ ಇಲ್ಲಿನ ಪೌರ ಕಾರ್ಮಿಕರು ಸಾರಿ ಹೇಳಿದಂತಿತ್ತು.ಪೌರಕಾರ್ಮಿಕರ ಪರಿಸರ ಜಾಗೃತಿಗೆ ಸ್ಥಳೀಯರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.