ಹುಬ್ಬಳ್ಳಿ: ಶುಕ್ರವಾರ ಬೆಳ್ಳಂಬೆಳಗ್ಗೆ ಹುಬ್ಬಳ್ಳಿಯ ವಿವಿಧ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪೊಲೀಸ್ ಠಾಣೆಗಳ ಪರಿಶೀಲನೆ ನಡೆಸಿದ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್.
ಕಾನೂನು ಸುವ್ಯವಸ್ಥೆ ಎಡಿಜಿಪಿ ಆದ ನಂತರ ಹುಬ್ಬಳ್ಳಿ ನಗರಕ್ಕೆ ಮೊದಲ ಬಾರಿಗೆ ಆಗಮಿಸಿದ ಎಡಿಜಿಪಿ ಅಲೋಕ ಕುಮಾರ ಅವರು
ಇಂದು ಬೆಳಿಗ್ಗೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ಹಾಗೂ ಉಪನಗರ ಪೊಲೀಸ್ ಠಾಣೆಗೆ ಭೇಟಿಯನ್ನು ನೀಡಿ ಸಿಬ್ಬಂದಿಗಳ ಪರಿಚಯವನ್ನು ಅಲೋಕ್ ಕುಮಾರ್ ಮಾಡಿದರು.
ಅಷ್ಟೇ ಅಲ್ಲದೆ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ವಿಚಾರಕ್ಕೇ ಸಂಬಂದಿಸಿದಂತೆ ಈಗಾಗಲೇ ಅಧಿಕಾರಿಗಳು ಉತ್ತಮ ರೀತಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಪ್ರಕರಣ ಕೂಡಾ ಕೋರ್ಟ್ ನಲ್ಲಿದೆ ಅಂತಾ ಅಲೋಕ ಕುಮಾರ ಕೇಶ್ವಾಪುರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.