ಕಾಣೆಯಾದ ಮುದ್ದು ಕಂದಮ್ಮ : ಹುಡಕಿ ಕೊಡುವಂತೆ ಪಾಲಕರ ಪರದಾಟ
ಹುಬ್ಬಳ್ಳಿ : ಹುಬ್ಬಳ್ಳಿಯ ಕೃಷ್ಣಾಪುರ ಓಣಿಯ ನಿವಾಸಿ ಭವಾನಿ ತವರ ಹಾಗೂ ಮಂಗಳಾ ತವರ ಅವರ ಮಗಳಾದ ತೇಜಸ್ವಿನಿ ತವರ ಇಂದು ಶಾಲೆಗೆ ಹೋದವಳು ಕಾಣೆಯಾಗಿದ್ದಾಳೆ.
ಇಂಡಿ ಪಂಪ್ ಬಳಿ ಇರುವ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂಬರ್ 19 ಶಾಲೆ ವಿದ್ಯಾರ್ಥಿನಿ ಆಗಿರುವ ತೇಜಸ್ವಿನಿ ಇಂದು ಬೆಳಿಗ್ಗೆ 9,30ಕ್ಕೆ ಮನೆಯಿಂದ ಹೋದವಳು ವಾಪಸ್ಸು ಬಂದಿಲ್ಲ
ಈ ಬಗ್ಗೆ ದೂರು ನೀಡಿರುವ ಪೋಷಕರು ಮಗಳನ್ನ ಹುಡಕಿ ಕೊಡುವಂತೆ ಪರದಾಡುತ್ತಿದ್ದಾರೆ, ಸಾರ್ವಜನಿಕರಿಗೆ ಈ ಮಗು ಸಿಕ್ಕಿದ್ದಲ್ಲಿ ಸ್ಥಳೀಯ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿಕೊಂಡಿದ್ದಾರೆ