ಅಪರಾಧಹುಬ್ಬಳ್ಳಿ- ಧಾರವಾಡ
ಕಲಘಟಗಿ ಬಳಿ “ಭೀಕರ” ಅಪಘಾತ “ಅಯ್ಯಪ್ಪ ಮಾಲಾದಾರಿ” ಸ್ಥಳದಲ್ಲೇ ಸಾವು..!
ಹುಬ್ಬಳ್ಳಿ:ತೆಲಂಗಾಣದಿಂದ ಶಬರಿ ಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಮಾಲದಾರಿಗಳು ಪ್ರಯಾಣ ಮಾಡುತ್ತಿದ್ದ ವಾಹನ ಅಪಘಾತವಾದ ಪರಿಣಾಮ ಓರ್ವ ಅಯ್ಯಪ್ಪ ಮಾಲಾದಾರಿ ಸಾವನಪ್ಪಿದ ಘಟನೆ ಕಲಘಟಗಿ ಬಳಿ ನಡೆದಿದೆ.
ತೆಲಂಗಾಣದ ವನಸ್ತಾಲಿಪುರಂ ದಿಂದ 9 ಜನ ಅಯ್ಯಪ್ಪ ಮಾಲಾದಾರಿಗಳು ಟವೇರಾ ವಾಹನದಲ್ಲಿ ಶಬರಿಮಲೆಗೆ ತೆರಳುತ್ತಿದ್ದಾಗ,ಕಲಘಟಗಿ ತಾಲ್ಲೂಕಿನ ರಾಮನಾಳ ಕ್ರಾಸ್ ಬಳಿ ಸೋಮವಾರ ರಾತ್ರಿ ಮೂರು ಗಂಟೆಯ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಟವೇರಾ ವಾಹನ ಪಲ್ಟಿಯಾದ ಪರಿಣಾಮ ವಾಹಣದಲ್ಲಿದ್ದ ಶಿವ ಬಾಲಾಜಿ ಎಂಬ ಬಾಲಕ ಸಾವನಪ್ಪಿದ್ದ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಅಪಘಾತವಾದ ಸ್ಥಳಕ್ಕೆ ಕಲಘಟಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.