ಹುಬ್ಬಳ್ಳಿ: ಹು-ಧಾ ಮಹಾನಗರ ಕಮೀಷನರೇಟ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಇದೀಗ ಕರ್ತವ್ಯ ಹೇಗೆ ನಿರ್ವಹಿಸಬೇಕು ಎಂಬ ಗೊಂದಲದಲ್ಲಿ ಸಿಲುಕಿ ಸಾಯುವಂತಹ ಪರಿಸ್ಥಿತಿಗಳು ನಿರ್ಮಾಣವಾಗುತ್ತಿವೆ.
ದಕ್ಷವಾಗಿ ಸಮಾಜದ ಶಾಂತಿಗಾಗಿ ಹಾಗೂ ಏಳಿಗೆಗಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದ ಪೊಲೀಸರಿಗೆ ಇದೀಗ ರಾಜಕೀಯ,ಸಂಘಟನೆಗಳು ಎಂಬ ಪೀಡೆ ವಕ್ಕರಿಸಿದ್ದು ಇದರ ಪ್ರಭಾವ ಹಿರಿಯ ಅಧಿಕಾರಿಗಳ ಮೇಲೆ ಬೀರಿ ಕಿರಿಯ ಸಿಬ್ಬಂದಿಗಳನ್ನು ತಮ್ಮ ಆಟಕ್ಕೆ ಬಳಸುವ ಗೊಂಬೆಗಳ ರೀತಿಯಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಬಳಸಿಕೊಳ್ಳುತ್ತಿದ್ದಾರೆ..!
ನಗರದಲ್ಲಿ ಇತ್ತೀಚಿಗೆ ಕೆಲವು ಸಂಘಟನೆಗಳ ಹಾವಳಿ ವಿಪರಿತವಾಗಿದ್ದು,ಇವುಗಳ ಕಾಟಕ್ಕೆ ಪೊಲೀಸರು ಕರ್ತವ್ಯ ನಿರ್ವಹಿಸುವುದೇ ಕಷ್ಟವಾಗಿದೆ,ಇದರ ನಡುವೆ ಇಂತಹ ಸಂಘಟನೆಗಳಿಗೆ ಅಂಕುಶ ಹಾಕಬೇಕಾದ ಹಿರಿಯ ಅಧಿಕಾರಿಗಳು ಮಾತ್ರ ಸಂಘಟನೆಯ ಜೊತೆ ಒಡನಾಟವನ್ನು ಚೆನ್ನಾಗಿ ಇಟ್ಟುಕೊಂಡು ಸಿಬ್ಬಂದಿಗಳನ್ನು ತುಳಿಯುವ ಕಾರ್ಯ ಮತ್ತೇ ಮುಂದುವರೆದಿದೆ.
ಹುಬ್ಬಳ್ಳಿಯ ನವನಗರದಲ್ಲಿ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸರಿಗೆ ಆವಾಜ್ ಹಾಕಿದವರ ಮೇಲೆ ಕಾನೂನು ಕ್ರಮ ಕೈಗೊಂಡ ಪೊಲೀಸ್ ಅಧಿಕಾರಿಯನ್ನೇ ವರ್ಗಾವಣೆ ಮಾಡಲಾಯಿತು.
ಇದರ ನಡುವೆ ಈ ಗಲಾಟೆ ಮಾಸುವ ಮುನ್ನವೇ ವಿಧ್ಯಾನಗರದಲ್ಲಿ ಮತ್ತೇ ಇದೆ ರೀತಿಯಾದ ಘಟನೆ ನಡೆದಿದ್ದು ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ರನ್ನು ಹಿರಿಯ ಅಧಿಕಾರಿಗಳು ಸಂಘಟನೆಯ ಜೊತೆ ಸೇರಿಕೊಂಡು ಕೈಗೊಂಬೆ ರೀತಿಯಲ್ಲಿ ಪೊಲೀಸರನ್ನು ಆಟವನ್ನು ಆಡಿಸಿ ಇದೀಗ ವರ್ಗಾವಣೆ ಭಾಗ್ಯವನ್ನು ಕರುಣಿಸಿದ್ದಾರೆ.
ಈ ರೀತಿಯಾದ ಘಟನೆಗಳಿಂದ ಹು-ಧಾ ಕಮಿಷನರೇಟ್ ಸಿಬ್ಬಂದಿಗಳ ಆತ್ಮಸ್ಥೈರ್ಯ ಕುಗ್ಗಿದಂತಾಗಿದ್ದು,ಮುಖವಾಡ ಧರಿಸಿದ ಅಧಿಕಾರಿಗಳ ಕೈ ಕೆಳಗೆ ಹೇಗೆ ಕೆಲಸವನ್ನು ಮಾಡಬೇಕು ಎಂಬುವ ಚಿಂತೆಯಲ್ಲಿ ಸಿಬ್ಬಂದಿ ಬೀಳುವಂತಾಗಿದೆ.
ಒಟ್ಟಿನಲ್ಲಿ ಕೊನೆಯದಾಗಿ ಹಿರಿಯ ಅಧಿಕಾರಿಗಳನ್ನು ನೆಚ್ಚಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗಳೇ ಹುಷಾರ್…..ಯಾಕಂದ್ರೆ ನಿಮಗೂ ಕೂಡಾ ಇದೆ ರೀತಿಯಾದ ಪರಿಸ್ಥಿತಿ ಬರಬಹುದು.