“ರೌಡಿ ಶೀಟರ್” ಹಾಕ್ತೀನಿ ಅಂತಾ ಬೆದರಿಕೆ ಹಾಕಿ “ಚಂಬು” ಮಾಡಲು ನಿಂತ್ರಾ “ಚಾರ್ಲಿ & ಚಂದ್ರ…?
ಹುಬ್ಬಳ್ಳಿ:ಸಮಾಜದಲ್ಲಿ ತಪ್ಪು ಮಾಡುವಂತಹ ಪುಂಡರಿಗೆ ಬಿಸಿ ಮುಟ್ಟಿಸಿ ಸಮಾಜವನ್ನು ತಣ್ಣಗೆ ಇಡಬೇಕಾದ ಪೊಲೀಸ್ ಇಲಾಖೆಯಲ್ಲಿಯೇ ಕೆಲವರು ದುಡ್ಡಿಗೋಸ್ಕರ ತಪ್ಪು ಮಾಡಿದ ಜನರನ್ನೇ ಟಾರ್ಗೆಟ್ ಮಾಡಿ ಅವರಿಂದ ಪದೇ ಪದೇ ಹಣ ಕೀಳುವಂಥ ಪ್ರವೃತ್ತಿಗೆ ಹು-ಧಾ ಕಮೀಷನರೇಟ್ ನ ಕೆಲವೊಂದಿಷ್ಟು ಇನ್ಸ್ಪೆಕ್ಟರ್ ಗಳು ತಮ್ಮ ಚೇಲಾಗಳಿಂದ ಹಣ ವಸೂಲಿ ಮಾಡಲು ಮುಂದಾಗುತ್ತಿದ್ದಾರೆಂಬ ಮಾತು ಇದೀಗ ಕೇಶ್ವಾಪುರ ರಸ್ತೆಯಿಂದ ಚೆನ್ನಮ್ಮ ಸರ್ಕಲ್ ವರೆಗೂ ಬಂದು ನಿಂತಿದೆ.
ನಗರದಲ್ಲಿ ಮಟ್ಕಾ ದಂದೇ ನಡೆಸುತ್ತಿರುವ ಕೆಲವೊಂದಿಷ್ಟು ಜನರಿಗೆ ನಿಮ್ಮ ಮೇಲೆ ಈಗಾಗಲೇ ಸಾಕಷ್ಟು ಪ್ರಕರಣಗಳು ಇವೆ ನೀವು ಬೇಗ ಬೇಗ ಸೆಟ್ಲಿಮೆಂಟ್ ಮಾಡಿ ಕೊಳ್ಳದೆ ಹೋದ್ರೆ ರೌಡಿ ಶೀಟರ್ ತೆಗೆಯುತ್ತೇವೆ ಅಂತಾ ತಮ್ಮ ಬಳಿ ಇರುವ ಕನ್ವೆನ್ಸ್ ಗಳಿಂದ ಬೆದರಿಕೆ ಹಾಕಲಾಗುತ್ತಿದೆ.
ಈ ಹಿಂದೆ ಕೂಡಾ ಪ್ರಕರಣವೊಂದರಲ್ಲಿ ಆರೋಪಿಯಿಂದ 50 k ಪಡೆದಿದ್ದರು ಕೂಡಾ ಮತ್ತೇ ಮತ್ತೇ ಬಾವಿಯಲ್ಲಿ ಚಂದ್ರ ಇಣುಕಿ ನೀರು ಕುಡಿಯಲು ಮುಂದಾಗಿದ್ದು ಈಗೇನು ರಹಸ್ಯವಾಗಿ ಉಳಿದಿಲ್ಲ,ಸಿಕ್ಕ ಸಿಕ್ಕಲ್ಲಿ ಸಂತೆಯಲ್ಲಿ ಈ ರೀತಿಯಾಗಿ ಬೇಕಾ ಬಿಟ್ಟಿ ಬೆದರಿಕೆ ಹಾಕಿ ಹಣ ಕೀಳಲು ಮುಂದಾದ ಇಂತಹ ಇನ್ಸ್ಪೆಕ್ಟರ್ ಹಾಗೂ ಕೆಲವು ಸಿಬ್ಬಂದಿಗಳಿಗೆ ಕಮೀಷನರ್ ಮೇಡಂ ಯಾವ ರೀತಿಯಾದ ಅಂಕುಶ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.