ಅಪರಾಧನಮ್ಮೂರುಬ್ರೇಕಿಂಗ್ ನ್ಯೂಸ್ಹುಬ್ಬಳ್ಳಿ- ಧಾರವಾಡ

“RSS” ನವರು ಹಾಗೂ “ಭಜರಂಗ ದಳದವರು” ಪೊಲೀಸ್ ಠಾಣೆಯಲ್ಲಿಯೇ ನಮ್ಮ “ಮನೆಯವರನ್ನು” ಹೊಡೆದರು..!

Spread the love


ಹುಬ್ಬಳ್ಳಿ : ಮೊನ್ನೇ ಹುಬ್ಬಳ್ಳಿಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಮ್ಮ ಸಮುದಾಯಕ್ಕೆ ನ್ಯಾಯ ಸಿಗಬೇಕು ಎಂದು ಕ್ರೈಸ್ತ ಸಮುದಾಯದ ಸಾವಿರಾರು ಜನ ಹುಬ್ಬಳ್ಳಿಯ ತಹಶೀಲ್ದಾರ ಮುಖಾಂತರ ಸರ್ಕಾರಕ್ಕೇ ಮನವಿಯನ್ನು ಕೊಟ್ಟರು.

ಈ ಸಂದರ್ಭದಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಹೊತ್ತ ಅವರಾದಿಯವರ ಪತ್ನಿ ಮಾತನಾಡಿ ಆ ದಿನ ನಡೆದ ಘಟನೆಯ ಬಗ್ಗೇ ವಿವರವಾಗಿ ಹೇಳಿದರು.

ತಾವು ಮಾಡುತ್ತಿದ್ದ ಪ್ರಾರ್ಥನಾ ಮಂದಿರಕ್ಕೆ ಹಿಂದೂ ಸಂಘಟನೆಯ ಕೆಲವೊಂದಿಷ್ಟು ಯುವಕರು ಬಂದು,ಓಂ ನಮಃ ಶಿವಾಯ ಅಂತಾ ಭಜನೆ ಮಾಡಿ,ಅಲ್ಲಿದ್ದ ಕೆಲವೊಂದಿಷ್ಟು ಸಾಮಗ್ರಿಗಳನ್ನು ನಾಶ ಮಾಡಿದರು.

ಇದರ ಬಗ್ಗೆ ದೂರನ್ನು ಕೊಡಲು ನವನಗರ ಪೊಲೀಸ್ ಠಾಣೆಗೆ ಹೋದ್ರು ಕೂಡಾ ಅಲ್ಲಿಗೆ RSS ಹಾಗೂ ಭಜರಂಗದಳ ದವರು ಬಂದು ಹೊಡೆದಾಟ ಮಾಡಿದಾಗ ನಮ್ಮ ಮನೆಯವರಿಗೆ ಏಟಾದ ಕಾರಣ ಅವರನ್ನು ಕೀಮ್ಸ್ ಅಸ್ಪತ್ರೆಗೆ ದಾಖಲು ಮಾಡಿದೆವು ಅಂತಾ ಅವರಾದಿ ಅವರ ಪತ್ನಿ ವಿಜಯಲಕ್ಷ್ಮಿ ಹೇಳಿದರು.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page