“ಲಾಂಗ್” ತೋರಿಸಿ ಹಣ ದರೋಡೆ ಮಾಡಿದ “ಹುಬ್ಬಳ್ಳಿ”ಗರು “MH ಇನ್ಸ್ಪೆಕ್ಟರ್” ಮಾಡಿದ್ದೇನು..?!
ಹುಬ್ಬಳ್ಳಿ:ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾಂಗ್ ತೋರಿಸಿ ದರೋಡೆ ಮಾಡಿದ್ದ ಹುಬ್ಬಳ್ಳಿ ಮೂಲದ ಇಬ್ಬರು ದರೊಡೆಕೋರರನ್ನು ಬಂಧನ ಮಾಡುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಅಂಬಡಗಟ್ಟಿ ಕ್ರಾಸ್ ಬಳಿಯ ಸರ್ವೀಸ್ ರಸ್ತೆಯಲ್ಲಿ ನಿಂತಿದ್ದ ವಾಹನ ಮಾಲೀಕರಿಗೆ ಲಾಂಗ್ ತೋರಿಸಿ ಅವರ ಬಳಿಯಿದ್ದ ಹಣ ವನ್ನು ದೋಚಿಕೊಂಡು ಪರಾರಿಯಾದ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಿತ್ತೂರು ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿರುವ ಮಹಾಂತೇಶ್ ಹೊಸಪೇಟೆ ನೇತೃತ್ವದ ತಂಡ ದರೋಡೆ ಮಾಡಿ ಪರಾರಿಯಾದ ದರೊಡೆಕೋರರ ಪತ್ತೆಗೆ ಮುಂದಾದಾಗ ಆರೋಪಿಗಳು ಹುಬ್ಬಳ್ಳಿ ಮೂಲದವರು ಎಂದು ಗೊತ್ತಾಗಿದೆ.
ಈ ಹಿಂದೆ ಕೂಡಾ ಆರೋಪಿಗಳು ಇದ್ದ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಇನ್ಸ್ಪೆಕ್ಟರ್ ಮಹಾಂತೇಶ್ ಖಚಿತ ಮಾಹಿತಿಯ ಮೇರೆಗೆ ಆರೋಪಿಗಳಾದ ವೀರಾಪುರ ಓಣಿಯ ಸುರೇಶ ಹಾಗೂ ಬಸವರಾಜ ನನ್ನು ಬಂದನ ಮಾಡಿ ಆರೋಪಿಗಳು ಕೃತ್ಯಕ್ಕೆ ಬಳಸಿದ ಲಾಂಗ್ ವಶಕ್ಕೇ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.