ಹುಬ್ಬಳ್ಳಿ:ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನ ತಲೆಗೆ ಬಾಟಲಿಯಿಂದ ಹಲ್ಲೆ ಮಾಡಿದ ಪರಿಣಾಮ ಯುವಕನೊಬ್ಬ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಂದು ರಾತ್ರಿ 7ಗಂಟೆಯ ಸುಮಾರಿಗೆ ಸಿಬಿಟಿ ಯಲ್ಲಿರುವ ತನ್ನ ಅಕ್ಕನನ್ನು ಭೇಟಿಯಾಗಲು ಬೈಕ್ ಮೇಲೆ ಹೊರಟಿದ್ದ ಅಬ್ದುಲ್ ಖಾದರ್ ಎಂಬಾತನ ಮೇಲೆ ಕಟಕರ ಓಣಿಯಲ್ಲಿನ ಬ್ಯಾಹಟ್ಟಿ ಪ್ಯಾಕ್ಟರಿ ಬಳಿಯಲ್ಲಿ ಇಬ್ಬರು ಯುವಕರು ಜಗಳ ತೆಗೆದು,ಅವಾಚ್ಯವಾಗಿ ನಿಂದನೆ ಮಾಡಿ ಜೀವಬೆದರಿಕೆ ಹಾಕಿದ್ದಲ್ಲದೇ ಅಬ್ದುಲ್ ಖಾದರ್ ತಲೆಗೆ ಬಾಟಲಿಯಿಂದ ಹಲ್ಲೆ ಮಾಡಿದರ ಪರಿಣಾಮ ಅಬ್ದುಲ್ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.