ಹುಬ್ಬಳ್ಳಿ:ನಗರದ ಪ್ರತಿಷ್ಠಿತ ಏರಿಯಾದಲ್ಲಿರುವ ಉದ್ಯಮಿಯೊಬ್ಬ ಮಾಡಬಾರದ ಕೆಲಸವನ್ನು ಮಾಡಿದ್ದನ್ನು ಸೆರೆ ಹಿಡಿದಿದ್ದ ಕೆಲವ ಯುವಕರ ಜೊತೆ ಪೊಲೀಸ್ ಸಿಬ್ಬಂದಿ ಸೇರಿ ಯಾರು ಊಹಿಸದ ರೀತಿಯಲ್ಲಿ ಉದ್ಯಮಿಯಿಂದ ಹಣವನ್ನು ಪೀಕಿರುವ ಸುದ್ದಿ ಇದೀಗ ನಾರ್ತ್ ಲೀಮಿಟ್ಸ್’ನಲ್ಲಿ ಕೇಳಿ ಬರುತ್ತಿದೆ.
ನಗರದ ಕೋಟ್ಯಾಧಿಪತಿ ಉದ್ಯಮಿಯ ಮಗನೊಬ್ಬ ಗಂಡು ಮಕ್ಕಳು ಮಾಡಬೇಕಾದ ಕೆಲಸವನ್ನು ಬಿಟ್ಟು ಬೇರೆ ಕೆಲಸ ಮಾಡಲು ಹೋಗಿ ಲಾಕ್ ಆಗಿದ್ದ.ಈ ಲಾಕ್ ತೆಗೆಯುವ ಸಲುವಾಗಿ ಉದ್ಯಮಿಯ ಮಗನಿಗೆ ಕೋಟಿ ಕೋಟಿ ಕೊಡುವಂತೆ ಲಾಕ್ ಮಾಡಿದವರನ್ನು ಲಾಕ್ ಮಾಡಲು ಉದ್ಯಮಿ ಖಾಕಿ ಮೊರೆ ಹೋಗಿದ್ದ.
ರೋಗಿ ಬಯಿಸಿದ್ದು ಹಾಲು-ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಎಂಬ ಮಾತಿನಂತೆ ಬಯಸದೇ ಬಂದ ಭಾಗ್ಯವನ್ನು ಯಾಕೆ ಬಿಡಬೇಕು ಎಂದು ಹೇಳಿ.ಲಾಕ್ ಮಾಡಲು ಬಂದವರನ್ನು ಲಾಕ್ ಮಾಡಿ ಉದ್ಯಮಿಯ ಬಳಿ 40 ಲಕ್ಷ ಹಣವನ್ನು ಪಡೆದು ಅದರಲ್ಲಿ ಚಾರ್ಲಿಗೂ ಮುಟ್ಟಿಸಿ ಪಿಚ್ಚರ್ ಎಲ್ಲಿಯೂ ಬರದಂತೆ ಲಾಕ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು.
ಇದರ ಕುರಿತು ಹಿರಿಯ ಅಧಿಕಾರಿಗಳು ಸರಿಯಾದ ತನಿಖೆ ನಡೆಸಿದ್ದೇ ಆದಲ್ಲಿ 40 ಲಕ್ಷ ತಿಂದವರು ಯಾರು.ಯಾವ ಲಾಕ್ ತೆಗೆಯುವ ಸಲುವಾಗಿ ಇಷ್ಟು ದೊಡ್ಡ ದುಡ್ಡಿನ ವ್ಯವಹಾರ ನಡೆದಿದೆ ಎಂಬುದು ತಿಳಿದು ಬಂದಾಗ ಅಸಲಿಯತ್ತು ಹೊರಬೀಳಲಿದೆ.