“ಅಂದರ್-ಬಾಹರ್” ಅಡ್ಡೆಗೆ “ಗೋವಿಂದನೇ” ಕಾವಲು..?ಡರೋ ಮತ್ ಹಮ್ ಹೈ ನಾ…
ಹುಬ್ಬಳ್ಳಿ:ನಗರದಲ್ಲಿ ನಡೆಯುತ್ತಿರೋ ಅಂದರ್ ಬಾಹರ್ ಗೆ ಕಡಿವಾಣ ಹಾಕಬೇಕಾದ ಇಲಾಖೆಯ ಸಿಬ್ಬಂದಿಯೇ ಪ್ರತಿವಾರ ಇಂತಿಷ್ಟು WM ಪಡೆದು ಸಲೀಸಾಗಿ ದಂದೇ ನಡೆಸುತ್ತಿದ್ದಾರೆ ಎಂಬ ಮಾತುಗಳು ಇದೀಗ ಮಚ್ಚಿ ಮಾರ್ಕೇಟ್ ನಿಂದ ಜನತಾ ಬಜಾರ್ ವರೆಗೂ ಕೇಳಿ ಬರುತ್ತಿದೆ.
ನಗರದ ಪೊಲೀಸ್ ಠಾಣೆಯಲ್ಲಿ ತಿರುಪತಿ ದೇವರ ಹೆಸರನ್ನು ಇಟ್ಟುಕೊಂಡಿರುವ ಸಿಬ್ಬಂದಿಯೇ ಪ್ರತಿವಾರವು ಅಂದರ್ ಬಾಹರ್ ಆಡಿಸುವ ಆಸಾಮಿಯಿಂದ ಇಂತಿಷ್ಟು ಹಣವನ್ನು ಪಡೆದು ಯು ಡೋಂಟ್ ವರಿ ಹಮ್ ಸಬ್ಕೋ ಸಾಮಾಲದೇಂಗೆ ಅಂತಾ ಧೈರ್ಯ ನೀಡಿ ರಾಜಾ ರೋಷವಾಗಿ ಅಂದರ್ ಬಾಹರ್ ನಡೆಸಲು ಕುಮ್ಮಕ್ಕು ನಡೆಸುತ್ತಿದ್ದಾರೆ.
ಪ್ರತಿ ದಿನವೂ 20 ರಿಂದ 25 ಪೆಟ್ಟಿ ಆಟ ಯಾವುದೇ ಅಂಜಿಕೆ ಅಳುಕಿಲ್ಲದೆ ನಡೆಯುತ್ತಿದ್ಸು ಇದಕ್ಕೆ ತಿರುಪತಿ ತಿಮ್ಮಪ್ಪನ ಹೆಸರನ್ನು ಇಟ್ಟುಕೊಂಡಿರುವ ಸಿಬ್ಬಂದಿ ಮ್ಯಾನೇಜ್ ಮಾಡಿಕೊಂಡು ಹೋಗುತ್ತಿದ್ದಾರಂತೆ, ಈಗಾಗಲೇ ಅವಳಿ ನಗರಕ್ಕೆ ಹೊಸದಾಗಿ ಬಂದಿರೋ ಕಮೀಷನರ್ ಮೇಡಂ ಇತ್ತ ಗಮನ ಹರಿಸಿದ್ದೆ ಆದಲ್ಲಿ ತಿರುಪತಿಯ ಹುಂಡಿಯಲ್ಲಿ ಬಿಳುತ್ತಿರೋ ದಕ್ಷಿಣೆಯ ಬಗ್ಗೆ ಸಮಗ್ರ ಮಾಹಿತಿ ಸಿಗಲಿದೆ.