ಹುಬ್ಬಳ್ಳಿ: ನಗರದ ಪಿಂಟೋ ಸರ್ಕಲ್ ಬಳಿಯಲ್ಲಿ ಕಾರಿನ ಚಕ್ರ ಗುಂಡಿಯೊಳಗೆ ಸಿಲುಕಿ ಒದ್ದಾಡುತ್ತಿದ್ದ ವೃದ್ಧ ದಂಪತಿಗಳಿಗೆ ಪೂರ್ವ ಸಂಚಾರಿ ಠಾಣೆಯ ಪೊಲೀಸರು ನೇರವಾದ ಘಟನೆ ನಡೆದಿದೆ.
ಇಂದು ಸಾಯಂಕಾಲ ಪಿಂಟೋ ಸರ್ಕಲ್ ಬಳಿಯಲ್ಲಿ ಗಂಗಾವತಿ ಮೂಲದ ವೃದ್ಧ ದಂಪತಿಗಳು ಚಲಾಯಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ,ರಸ್ತೆ ಪಕ್ಕದ ಗುಂಡಿಯಲ್ಲಿ ಕಾರಿನ ಮುಂಭಾಗದ ಚಕ್ರ ಸಿಲುಕಿದ ಪರಿಣಾಮ ವೃದ್ಧ ದಂಪತಿಗಳು ಪರದಾಡುತ್ತಿದ್ದಾಗ ಸಂಚಾರಿ ಪೊಲೀಸರು ಗಮನಿಸಿ ಇನ್ನುಳಿದ ಸಂಚಾರಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೂರ್ವ ಸಂಚಾರಿ ಠಾಣೆಯ ಪೊಲೀಸರು ಕಾರಿನ ಚಕ್ರ ಸಿಲುಕಿದ ಗುಂಡಿಯಲ್ಲಿ ಇಳಿದು,ಕಾರನ್ನು ಎತ್ತಿ ಕಾರಿನ ಚಕ್ರ ರಸ್ತೆಯಲ್ಲಿ ನಿಲ್ಲುವಂತೆ ಮಾಡಿದ್ದಾರೆ,ಪೂರ್ವ ಸಂಚಾರಿ ಪೊಲೀಸರ ಕಾರ್ಯವನ್ನು ಮೆಚ್ಚಿ ವೃದ್ಧ ದಂಪತಿಗಳು ಪೊಲೀಸರಿಗೆ ಧನ್ಯವಾದಗಳನ್ನು ತಿಳಿಸಿ ಅಲ್ಲಿಂದ ತೆರಳಿದರು.