ಹುಬ್ಬಳ್ಳಿಯಲ್ಲಿ ಖಾಸಗಿ ಆಸ್ಪತ್ರೆಯ ವೈಧ್ಯರ ನಿರ್ಲಕ್ಷ್ಯ ಬಾಣಂತಿ ಸಾವು..!

Spread the love

ಹುಬ್ಬಳ್ಳಿ: ಅದು ತುಂಬು ಕುಟುಂಬ, ಆ ಕುಟುಂಬಕ್ಕೆ ಮತ್ತೊಂದು ಕುಡಿ ಸೇರ್ಪಡೆಗೊಂಡು ಆ ಕುಟುಂಬದ ಸಂತೋಷವನ್ನು ಇನ್ನಷ್ಟು ಇಮ್ಮಡಿಯಾಗಬೇಕಿತ್ತು. ಆದರೆ ದುರ್ದೈವವೆಂಬಂತೆ ಆ ಕುಟುಂಬಕ್ಕೆ ಹೊಸ ಕುಡಿ ಸೇರ್ಪಡೆಗೊಂಡ ಕೆಲವೆ ಕ್ಷಣಗಳಲ್ಲಿ, ಜೀವ ನೀಡಿದ ಜೀವದಾತೆ ಮತ್ತೆ ಬಾರದ ಲೋಕಕ್ಕೆ ಪಯಣ ಬೆಳೆದಿದ್ದು,ಇದೀಗ ಕುಟುಂಬಸ್ಥರು ಕಣ್ಣೀರು ಹಾಕುವಂತಾಗಿದೆ. ಅಷ್ಟಕ್ಕೂ ಈ ಮನಕಲುಕುವ ಕಥೆ ಏನೂ ಅಂಥೀರಾ ಈ ಸ್ಟೋರಿ.

ಹೀಗೆ ಖಾಸಗಿ ಆಸ್ಪತ್ರೆಯ ವೈದ್ಯರ ಜೊತೆಗೆ ನಮ್ಮ ಸೊಸೆಯ ಸಾವಿಗೆ ನೀವೆ ಕಾರಣ ಎಂದು ಆರೋಪಿಸುತ್ತಿರುವ ಕುಟುಂಬಸ್ಥರು, ಮತ್ತೊಂದೆಡೆ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಆಸ್ಪತ್ರೆಯಲ್ಲಿ ಬೀಡುಬಿಟ್ಟಿರುವ ಪೋಲಿಸರು. ಈ ಎಲ್ಲ ಘಟನೆಗಳಿಗೆ ಸಾಕ್ಷಿಯಾಗಿದ್ದು ದೇಶಪಾಂಡೆ ನಗರದಲ್ಲಿನ ಹೆಬಸೂರು ಖಾಸಗಿ ಆಸ್ಪತ್ರೆ.

ಹೌದು… ಹೀಗೆ ಫೋಟೋದಲ್ಲಿ ಕಾಣುತ್ತಿರುವ ಈಕೆಯ ಹೆಸರು ನಫೀಜಾ, ಹುಬ್ಬಳ್ಳಿಯ ಕೇಶ್ವಾಪುರದ ಹರಿಹಂತ ಕಾಲೋನಿಯ ನಿವಾಸಿ. ಕಳೆದ ಗುರುವಾರ ದೇಶಪಾಂಡೆ ನಗರದ ಹೆಬಸೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿ ಮುದಾದ ಮಗುವಿಗೆ ಜನ್ಮವನ್ನು ನೀಡಿದ್ಳು. ಆದರೆ ಹೆರಿಗೆ ನಂತರ ನಫೀಜಾ ತೀವ್ರ ಅಸ್ವಸ್ಥಳಾದ ಕಾರಣ, ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಿದರು ಕೂಡಾ ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ನಫೀಜಾ ಶುಕ್ರವಾರ ಮೃತಪಟ್ಟಿದ್ದು, ಇದೀಗ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವನ್ನಪ್ಪಿದ್ದಾಳೆಂದು ಆರೋಪಿಸುತ್ತಿದ್ದಾರೆ.

ಸದ್ಯ ಕುಟುಂಬಸ್ಥರು ತಮ್ಮ ಸೊಸೆಯ ಸಾವಿಗೆ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದರೇ,ಇತ್ತ ಹೆಬಸೂರ ಆಸ್ಪತ್ರೆಯ ವೈದ್ಯರು ತಮ್ಮ ಮೇಲಿನ ಆರೋಪಕ್ಕೆ ಉತ್ತರ ನೀಡಿದ್ದು, ನಾವು ನಫೀಜಾಳನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ ಪರಿಸ್ಥಿತಿ ನಮ್ಮ ಕೈಮೀರಿದ ನಂತರ ನಮ್ಮಲ್ಲಿ ಐಸಿಯು ಇಲ್ಲದಕ್ಕೆ ಕಿಮ್ಸ್ ಆಸ್ಪತ್ರೆಗೆ ರವಾನಿಸಲು ತಿಳಿಸಿದೆವು ಅಂತಾ ತಮ್ಮ ಮೇಲಿನ ಆರೋಪವನ್ನು ಅಲ್ಲ ಗಳೆದಿದ್ದಾರೆ.

ಒಟ್ಟಿನಲ್ಲಿ ಮುದಾದ ಮಗುವಿಗೆ ನಫೀಜಾ ಜನ್ಮನೀಡಿ, ಮಗುವನ್ನು ಮುದ್ದಾಡಿ ಲಾಲನೆ, ಪಾಲನೆ ಮಾಡಬೇಕಿದ್ದ ನಫೀಜಾ ಮಗುವಿನ ಮುಖವನ್ನು ನೋಡದೆ ಸಾವನ್ನಪ್ಪಿದ್ದು,ಸದ್ಯ ನಪೀಜಾಳ ಸಾವಿಗೆ ಕಾರಣರಾದ ತಪ್ಪಿತಸ್ಥರಿಗೆ ಭಗವಂತನೇ ಸರಿಯಾದ ಶಿಕ್ಷೆ ನೀಡಬೇಕಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page