“ಚಿಗರಿ” ಬಸ್ ಚಾಲಕನ ಮೇಲೆ “ಹಲ್ಲೇ” ಜುಟ್ಟು ಹಿಡಿದು “ಆರೋಪಿಯನ್ನು” ಎಳೆದು ತಂದ “ಹೆಡ್ ಕಾನ್ಸ್ಟೇಬಲ್”..!
ಹುಬ್ಬಳ್ಳಿ:ಚಿಗರಿ ಬಸ್ ಚಾಲಕನ ಮೇಲೆ ಹಲ್ಲೇ ಮಾಡಿ ಪರಾರಿಯಾಗಲು ಯತ್ನಿಸಿದ ಯುವಕನೊಬ್ಬನನ್ನು ಸಂಚಾರಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಬೆನ್ನತ್ತಿ ಹಿಡಿದ ಘಟನೆ ನಗರದಲ್ಲಿ ನಡೆದಿದೆ.
ಹುಬ್ಬಳ್ಳಿಯಿಂದ ಧಾರವಾಡದತ್ತ ಹೋಗುತ್ತಿದ್ದ ಚಿಗರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ,ಬಸ್ ನಿಲ್ಲಿಸುವ ವಿಚಾರಕ್ಕೇ ಚಾಲಕನ ಜೊತೆ ಜಗಳ ತೆಗೆದು ಇಸ್ಕಾನ್ ಟೆಂಪಲ್ ಬಳಿ ಚಾಲಕನ ಮೇಲೆ ಹಲ್ಲೇ ಮಾಡಿದ್ದಾನೆ.
ಕೂಡಲೇ ಅದೇ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಉತ್ತರ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಕಲ್ಮೇಶ ಕಮ್ಮಾರ ಎಂಬುವರು ಚಾಲಕನನ್ನು ವಿಚಾರಣೆ ಮಾಡಲು ಬಂದಾಗ,ಯುವಕ ಕಲ್ಮೇಶ್ ಅವರನ್ನು ತಳ್ಳಿ ಪರಾರಿಯಾಗಲು ಯತ್ನಿಸಿದ್ದಾನೆ.
ಕೂಡಲೇ ಕಲ್ಮೇಶ್ ಅವರು ಪರಾರಿಯಾಗುತ್ತಿದ್ದ ಯುವಕನನ್ನು ಬೆನ್ನತ್ತಿ ಹಿಡಿದು,ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಗೆ ಒಪ್ಪಿಸುವ ಕಾರ್ಯವನ್ನು ಮಾಡಿದ್ದಾರೆ.
ಸಧ್ಯ ಕಲ್ಮೇಶ್ ಅವರು ಕಳ್ಳನನ್ನು ಬೆನ್ನತ್ತಿ ಹಿಡಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು,ಸಾರ್ವಜನಿಕರು ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.