ಹುಬ್ಬಳ್ಳಿ
ಹುಬ್ಬಳ್ಳಿಯ “ಉಪ” ನಗರದಲ್ಲಿ “ಶ್ರೀನಿವಾಸ”ನ ಕಲ್ಯಾಣ ಕಾರ್ಯಕ್ಕೆ ಇಂತೀಷ್ಟು..!
ಹುಬ್ಬಳ್ಳಿ: ನಗರದಲ್ಲಿ ಇತ್ತೀಚಿಗೆ ಕಲ್ಯಾಣ ಕಾರ್ಯಕ್ರಮಗಳು ಸದ್ದಿಲ್ಲದೇ ಮತ್ತೆ ಶುರುವಾಗಿದ್ದು.ಸಣ್ಣ ಪುಟ್ಟ ಗಲಾಟೆ ವಿಚಾರದಲ್ಲೂ ಕೂಡಾ ಎರಡು ಕಡೆಯ ಭಕ್ತರ ಬಳಿ “161” ರೂಪದಲ್ಲಿ ವಿಶೇಷ ಪೂಜೆ ಮಾಡುವುದರ ಮೂಲಕ ದಕ್ಷಿಣೆ ಪಡೆದು ಸಮಾಧಾನ ಮಾಡಿಕೊಳ್ಳುತ್ತಿರೋ ದೃಶ್ಯಗಳನ್ನು ಸಂಗೊಳ್ಳಿ ರಾಯಣ್ಣ ನಿಂತು ನೋಡುವಂತಾಗಿದೆ.
ಜನತಾ ಬಜಾರನಲ್ಲಿ ಕ್ಷುಲ್ಲಕ ವಿಚಾರಕ್ಕೇ ಇಬ್ಬರ ನಡುವೆ ಜಗಳ ಏರ್ಪಟ್ಟು ಅದು ದೇವಾಲಯದ ಮೆಟ್ಟಿಲನ್ನು ಏರಿದೆ,ಆದ್ರೆ ಇಬ್ಬರಿಗೂ ಬುದ್ದಿ ಹೇಳಿ ಕಳುಹಿಸಬೇಕಾದ ಕೆಲವು ಅರ್ಚಕರು ನೀವೇ ನೀವೇ ರಾಜಿ ಆದ್ರೂ ಕೂಡಾ ಇಂತಿಷ್ಟು ದಕ್ಷಿಣೆ ಕೊಡಬೇಕು ಅಂತಾ ಹೇಳಿದ್ದಾರೆ.
ಮೊದಲಿಗೆ 30k ದಕ್ಷಿಣ ಕೇಳಿ ಅದು ಆಗದೆ ಇದ್ದಾಗ 15k ಆದ್ರೂ ಕೊಡಿ ಅಂತಾ ಹೇಳಿದ್ದಾರೆ ಆದ್ರೆ ಅಂತಿಮವಾಗಿ ಅವರು ಎಷ್ಟು ಕೊಟ್ಟರೋ ಇವರು ಎಷ್ಟು ಇಸಿದುಕೊಂಡರು ಎಂಬುದು ದಕ್ಷಿಣೆ ಕೊಟ್ಟ ಭಕ್ತ ಹಾಗೂ ಭಕ್ತಿಯಿಂದ ದಕ್ಷಿಣೆ ಇಸಿದುಕೊಂಡ ಶ್ರೀನಿವಾಸನಿಗೆ ಗೊತ್ತು.