ಹುಬ್ಬಳ್ಳಿಯಲ್ಲಿ ನಡೆದ “8” ವರ್ಷದ ಬಾಲಕನ ಕೊಲೆ “ರಹಸ್ಯ” ಭೇದಿಸಿದ್ದು ಯಾರು ಗೊತ್ತಾ..!
ಹುಬ್ಬಳ್ಳಿ: ನಗರದಲ್ಲಿ ನಡೆದಿದ್ದ ಎಂಟು ವರ್ಷದ ಬಾಲಕನ ಕೊಲೆಯ ರಹಸ್ಯವನ್ನು ಬೇಧಿಸಲು ಪ್ರಮುಖ ಭೇದಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಬೆಂಡಿಗೇರಿ ಠಾಣೆಯ PSI ಶರಣ ದೇಸಾಯಿ ಹಾಗೂ ಸಿಬ್ಬಂದಿ ವೆಂಕಟೇಶ ಸುರವೇ ಕಾರ್ಯಕ್ಕೆ ಇದೀಗ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಶುಕ್ರವಾರ ಮಿಲ್ಲತ್ತ ನಗರದ ಆಟದ ಮೈದಾನದ ಮುಳ್ಳಿನ ಪೊದೆಯೊಳಗೆ ನದೀಮ್ ಎಂಬ ಎಂಟು ವರ್ಷದ ಬಾಲಕನನ್ನು ಕೊಲೆ ಮಾಡಿ ಎಸೆಯಲಾಗಿತ್ತು,ಆದ್ರೆ ಘಟನೆ ನಡೆದ ಸ್ಥಳದಲ್ಲಿ ಯಾವುದೇ ರೀತಿಯಾದ ಸಿಸಿ ಕ್ಯಾಮರಾಗಳು ಇಲ್ಲದ ಕಾರಣ ಕೊಲೆ ಮಾಡಿದ ಆರೋಪಿಗಳು ಯಾರು ಎಂಬ ಮಾಹಿತಿ ಕಲೆ ಹಾಕಲು ಸಾಕಷ್ಟು ಸಮಸ್ಯೆಗಳು ಆಗಿತ್ತು.
ಆದ್ರೆ PSI ಶರಣ್ ದೇಸಾಯಿ ಹಾಗೂ ವೆಂಕಟೇಶ ಸುರವೇ ಕೊಲೆಯ ರಹಸ್ಯವನ್ನು ಬೇಧಿಸಲು ಪ್ರಮುಖ ಪಾತ್ರ ವಹಿಸಿ ಕೊಲೆ ಮಾಡಿದ ಸೆಟ್ಲಿಮೆಂಟ್ ನ ನಿವಾಸಿಯಾದ ರವಿ ಬಳ್ಳಾರಿ ಎಂಬಾತನನ್ನು ಕರೆದು ತಂದು ವಿಚಾರಣೆ ಮಾಡಿದಾಗ ರವಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ,ಸದ್ಯ ಕೊಲೆ ಮಾಡಿದ ಆರೋಪಿಯನ್ನು 24 ಗಂಟೆಯಲ್ಲಿ ಬಂದನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ PSI ಹಾಗೂ ಸಿಬ್ಬಂದಿ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ