“ಕೊಲೆ”ಯ ಕೇಸ್’ ನಲ್ಲಿ ಮಾತನಾಡದ ರಾಜಕಾರಣಿಗಳು “ಮಟ್ಕಾ ಕೇಸ್” ನಲ್ಲಿ ಮಾತನಾಡುತ್ತಿರೋದು ಯಾಕೆ ಗೊತ್ತಾ..!
ಹುಬ್ಬಳ್ಳಿ:ನಗರದಲ್ಲಿ ನಡೆದಿದ್ದ ಗ್ರಾಮ ಪಂಚಾಯತಿ ಸದಸ್ಯನ ಕೊಲೆಯ ಪ್ರಕರಣವನ್ನು ಪೊಲೀಸರು ಸರಿಯಾಗಿ ತನಿಖೆಯನ್ನು ಮಾಡುತ್ತಿಲ್ಲ ಎಂದು ಆರೋಪಿಸಿ.ಈ ಕೊಲೆಯ ಪ್ರಕರಣವನ್ನು ಸಿಬಿಐ ಗೆ ವರ್ಗಾವಣೆ ಮಾಡಿ ಅಂತಾ ಕೊಲೆಯಾದ ವ್ಯಕ್ತಿಯ ಕುಟುಂಬದವರು ಸಾಕಷ್ಟು ಪ್ರತಿಭಟನೆ ಮಾಡಿದರು ಕೂಡಾ ಬಾಯ್ಬಿಡದ ರಾಜಕಾರಣಿಗಳು ಇದೀಗ ಮಟ್ಕಾ ಪ್ರಕರಣದಲ್ಲಿ ಬಾಯ್ಬಿಡುತ್ತಿರೋದನ್ನು ನೋಡಿದ್ರೆ ರಾಜಕಾರಣವನ್ನು ಹೇಗೆಲ್ಲ ಮಾಡಬಹುದು ಎಂಬುದಕ್ಕೆ ಇದೊಂದು ಉದಾರಣೆ ಆಗಿದೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದೀಪಕ ಪಟದಾರಿ ಕೊಲೆ ಪ್ರಕರಣದಲ್ಲಿ ಪ್ರಭಾವಿ ರಾಜಕೀಯ ಮುಖಂಡರುಗಳ ಹಸ್ತಕ್ಷೇಪ ಕೂಡಾ ಕೇಳಿ ಬಂದಿತ್ತು, ಆಗ ಪಟದಾರಿ ಕುಟುಂಬದವರು ಪೊಲೀಸ್ ಠಾಣೆಯ ಮುಂದೆಯೇ ಸಾಕಷ್ಟು ಪ್ರತಿಭಟನೆ ಮಾಡಿದರು ಕೂಡಾ,ಕೊಲೆಯ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ರಕ್ಷಣೆ ಮಾಡುವಲ್ಲಿ ರಾಜಕಾರಣಿ ಆರೋಪಿಗಳ ಬೆನ್ನಿಗೆ ನಿಂತು ರಕ್ಷಣೆ ಮಾಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.
ಆದ್ರೆ ಇದೀಗ ಕಸಬಾಪೇಟ್ ಪೊಲೀಸ್ ಠಾಣೆಯ ದಾಖಲಾದ ಮಟ್ಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೇ ಖುದ್ದು ನ್ಯಾಯಾಧೀಶರ ಮುಂದೆ ಶರಣಾಗಿ ತನ್ನ ತಪ್ಪನ್ನು ಒಪ್ಪಿಕೊಂಡು ದಂಡ ಕಟ್ಟಿ ಬಂದಿದ್ದರು ಕೂಡಾ. ಫೇಕ್ FiR ಮಾಡಿದ್ದಾರೆ,ಕಾನೂನು ಸುವ್ಯವಸ್ಥೆ ಸರಿ ಎಂದು ಬೊಬ್ಬಿರಿಯುವ ರಾಜಕಾರಣಿಗಳು ಪಟದಾರಿ ಕೊಲೆಯ ಪ್ರಕರಣದಲ್ಲಿ ಯಾಕೆ ಬಾಯ್ಬಿಟ್ಟಿಲ್ಲ ಎಂಬುದು ಕೂಡಾ ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.