ಹುಬ್ಬಳ್ಳಿಯ “ರಾಯನಾಳದಲ್ಲಿ” ರೌಡಿ ಶೀಟರ್ “ದೀಪಕ ಪಠದಾರಿ”ಯನ್ನು ಕೊಚ್ಚಿ ಭರ್ಬರ “ಕೊಲೆ”.
ಹುಬ್ಬಳ್ಳಿಯ ರಾಯನಾಳದಲ್ಲಿ ರೌಡಿಶೀಟರ್ (ಹಾಲಿ ಪಂಚಾಯತ ಸದಸ್ಯನನ್ನು) ಊರಿನ ಮಧ್ಯದಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ದೀಪಕ ಪಠದಾರಿ ಎಂಬಾತನೆ ಕೊಲೆಗೀಡಾದ ದುರ್ದೈವಿಯಾಗಿದ್ದು,ನಿನ್ನೇ ರಾತ್ರಿ 10.30 ರ ಸುಮಾರಿಗೆ ರಾಯನಾಳದಲ್ಲಿ 10 ಕ್ಕಿಂತ ಹೆಚ್ಚು ಜನರಿದ್ದ ಗುಂಪು ಮಾರಕಾಸ್ತ್ರಗಳಿಂದ ಹಲ್ಲೇ ಮಾಡಿತ್ತು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದೀಪಕ ನನ್ನು ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರು ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಕೀಮ್ಸ್ ಆಸ್ಪತ್ರೆಯಲ್ಲಿ ದೀಪಕ್ ಅಸುನೀಗಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಡಿಸಿಪಿ ಶಾಹಿಲ್ ಬಾಗ್ಲಾ ಹಾಗೂ ಹಳೇ ಹುಬ್ಬಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.