ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ “ಅಣ್ಣನಿಗೆ ಮಹೂರ್ತ” ಇಟ್ಟ ‘ಪುಡಿ ರೌಡಿ’ಗಳು ಅಣ್ಣ ಮಿಸ್ “ತಮ್ಮ ಲಾಕ್”..!

Spread the love

ಹುಬ್ಬಳ್ಳಿ:ಅವರೆಲ್ಲ ಸ್ನೇಹಿತರು ಒಂದೇ ಕಡೆ ಕೆಲಸ ಮಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದರು ಆದ್ರೆ ತಮ್ಮ ಜೊತೆಗಿದ್ದ ಸ್ನೇಹಿತನೊಬ್ಬ ತನ್ನ ಸ್ನೇಹಿತನ ತಂಗಿಯನ್ನೇ ಪಟಾಯಿಸಿ ಮದುವೆ ಮಾಡಿಕೊಂಡು ಗೆಳೆತನಕ್ಕೆ ಧೋಖಾ ಮಾಡಿದ್ದ.ಅಷ್ಟೇ ಅಲ್ಲದೆ ತನ್ನ ಸ್ನೇಹಿತನಿಗೆ ಹೊಟ್ಟೆ ಊರಿಸುವ ಸಲುವಾಗಿ ಮದುವೆ ಆಗಿದ್ದ ಯುವತಿಯ ನಂಬರ್ ಗೆ ಸ್ಟೇಟಸ್ ಹಾಕಿ ಆತನ ಅಣ್ಣನಿಗೆ ಊರಿಯುವಂತೆ ಮಾಡುತ್ತಿದ್ದ.ಈಗ ಇದೆ ಸ್ಟೇಟಸ್ ವಿಚಾರಕ್ಕೇ ಇದೀಗ ಯುವಕನೊಬ್ಬನ ಮೇಲೆ ಪುಡಿರೌಡಿಗಳು ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ ಪರಿಣಾಮ ಸಾವಿನ ದವಡೆಗೆ ತಲುಪಿದ್ದು ಆತನ ಸ್ಥಿತಿ ಗಂಭೀರವಾಗಿದೆ…

ಹೀಗೆ ಆಸ್ಪತ್ರೆಯ ಬೆಡ್ ಮೇಲೆ ಮೂಗು,ತುಟಿ, ಕಿವಿಯ ತುಂಬೆಲ್ಲ ರಕ್ತಮಯ ಮಾಡಿಕೊಂಡು ಆಸ್ಪತ್ರೆಯ ಬೆಡ್ ಮೇಲೆ ಮಲಗಿರೋ ಈತನ ಹೆಸರು ಉಸ್ಮಾನಸಾಬ ಮುಳಗುಂದ. ಅಣ್ಣಿಗೇರಿ ನಿವಾಸಿ ಸೋಮವಾರ ರಾತ್ರಿ ತನ್ನ ಅಣ್ಣನ ತಂಗಿಯ ಮದುವೆ ವಿಚಾರಕ್ಕೇ ನೆಲವಡಿ ಗ್ರಾಮದಲ್ಲಿ ಹುಬ್ಬಳ್ಳಿಯ ಕೆಲವು ಯುವಕರ ಜೊತೆ ಮಾತುಕತೆ ಮಾಡಲು ತನ್ನ ಅಣ್ಣ ಹಾಗೂ ಸ್ನೇಹಿತರ ಜೊತೆ ಬಂದಿದ್ದ.ಆದ್ರೆ ಹುಬ್ಬಳ್ಳಿಯಿಂದ ಬಂದಿದ್ದ 10 ಕ್ಕೂ ಹೆಚ್ಚು ಜನರು ಮಾರಕಾಸ್ತ್ರ ಗಳಿಂದ ಹಲ್ಲೆ ಮಾಡಲು ಮುಂದಾದಾಗ ಎಲ್ಲರೂ ತಪ್ಪಿಸಿಕೊಂಡು ಉಸ್ಮಾನಸಾಬ ಮಾತ್ರ ಹುಬ್ಬಳ್ಳಿಯ ಪುಡಿ ರೌಡಿಗಳ ಕೈಗೆ ಸಿಕ್ಕಾಗ ಆತನನ್ನು ಅಲ್ಲಿನ ಕಿಡ್ನ್ಯಾಪ್ ಮಾಡಿ ಹುಬ್ಬಳ್ಳಿಯ ಗಬ್ಬುರಿಗೆ ಕರೆತಂದು ಮನಸ್ಸೋ ಇಚ್ಛೆ ಥಳಿಸಿದ್ದಾರೆ.

ಶಲವಡಿ ಗ್ರಾಮಕ್ಕೆ ಮಾತುಕತೆಗೆಂದು ಬಂದಿದ್ದ ಗಬ್ಬುರಿನ ಬೆಂಕಿ ಅಲಿಯಾಸ್ ಮಹಾದೇವ ನೆಲವಡಿ ಗ್ರಾಮದ ದಾಬಾದಲ್ಲಿ ಕೆಲ್ಸ ಮಾಡಿಕೊಂಡಾಗ ಸ್ನೇಹಿತನಾಗಿದ್ದ ಶಾರುಖ್ ಎಂಬಾತನ ತಂಗಿಯನ್ನು ಪಟಾಯಿಸಿ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದ.ಹೀಗಾಗಿ ಇಬ್ಬರ ನಡುವೆ ಪರಸ್ಪರ ವೈರತ್ವ ಬೆಳೆದಿತ್ತು.ಈ ನಡುವೆ ಮಹಾದೇವ ತನ್ನ ಹೆಂಡತಿಯ ಮೊಬೈಲ್ ಗೆ ಸ್ಟೇಟಸ್ ಹಾಕಿ ಶಾರುಖ್ ಗೆ ಇರಿಸು ಮುರಿಸು ಉಂಟಾಗುವಂತೆ ಮಾಡಿದ್ದ.ಸ್ಟೇಟಸ್ ನೋಡಿದ ಶಾರುಖ್ ತನ್ನ ತಂಗಿಗೆ ಬೈದಿದಕ್ಕೆ ಸಿಟ್ಟಿಗೆದ್ದ ಮಹಾದೇವ ಪುಡಿ ರೌಡಿಗಳ ಗ್ಯಾಂಗ್ ಕಟ್ಟಿಕೊಂಡು ಮಾತುಕತೆ ನೆಪದಲ್ಲಿ ನೆಲವಡಿ ಗ್ರಾಮದಲ್ಲಿ ಶಾರುಖ್ ಹಾಗೂ ಆತನ ಸ್ನೇಹಿತರ ಮೇಲೆ ಅಟ್ಯಾಕ್ ಮಾಡಿದ್ದ.

ಮಾತುಕತೆಗೆಂದು ಕರೆಯಿಸಿ ಮಾರಕಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಲ್ಲದೆ ಉಸ್ಮಾನಸಾಬ ಎಂಬಾತನನ್ನು ಅಪಹರಿಸಿ ಹುಬ್ಬಳ್ಳಿಯ ಗಬ್ಬುರಿನ ಸಾರಿಗೆ ಇಲಾಖೆಯ ಕಛೇರಿಯ ಹಿಂಬದಿಗೆ ಕರೆದುಕೊಂಡು ಬಂದು.ಮೃಗಗಳಂತೆ ಆತನ ಮೇಲೆ ಹಲ್ಲೆ ನಡೆಸಿದ ಪುಡಿ ರೌಡಿಗಳ ಮೇಲೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಮೇಡಂ ಸೂಕ್ತ ಕ್ರಮವನ್ನು ಕೈಗೊಳ್ಳುವುದರ ಜೊತೆಗೆ.ನಗರದಲ್ಲಿ ಲಂಗೂ ಲಾಗಾಮಿಲ್ಲದೆ ಮೆರೆಯುತ್ತಿರೋ ಈ ಇಂತಹ ಪುಂಡರಿಗೆ ಲಗಾಮು ಹಾಕಿ ಪುಡಿ ರೌಡಿಗಳ ಬಾಲ ಕಟ್ ಮಾಡೋ ಕೆಲಸವನ್ನು ಮಾಡಬೇಕಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page