ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ “ಸೀಗರೇಟ್” ವಿಚಾರಕ್ಕೆ ಯುವಕನಿಗೆ “ಚಾಕು” ಇರಿದು ಭೀಕರ “ಕೊಲೆ”..!

Spread the love

ಹುಬ್ಬಳ್ಳಿ:ಆತ ಖಾಸಗಿ ಬ್ಯಾಂಕ್’ನ ಉದ್ಯೋಗಿ ಕೈ ತುಂಬಾ ಸಂಬಳಾ ತನ್ನ ಕುಟುಂಬದ ಜೊತೆ ಚೆನ್ನಾಗಿ ಜೀವನ ಸಾಗಿಸುತ್ತಿದ್ದ,ಸಂಜೆ ಆದ್ರೆ ಸಾಕು ತನ್ನ ಏರಿಯಾದಲ್ಲಿನ ಹುಡುಗರ ಜೊತೆ ಸೇರಿಕೊಂಡು ಧಮ್ ಹೊಡೀತಿದ್ದ, ಹೀಗೆ ಧಮ್ ಹೊಡೆಯುವ ಜಾಗದಲ್ಲಿ ಪರಿಚಯವಾದ ಸ್ನೇಹಿತನ ಜೊತೆ ಸ್ಮಾರ್ಟ್ ವಾಚ್ ಗೋಸ್ಕರ ಸ್ಟಾರ್ಟ್ ಆದ ಒಂದು ಸಣ್ಣ ಜಗಳ ಇದೀಗ ಕೊಲೆಯ ಹಂತಕ್ಕೆ ಹೋಗಿದೆ ಅಷ್ಟಕ್ಕೂ ಇದೇನು ಬ್ಯಾಂಕ್ ಉದ್ಯೋಗಿಯ ದುರಂತ ಕಥೆ ಅಂತೀರಾ ಈ ಸ್ಟೋರಿ ನೋಡಿ.

ಹೀಗೆ ಆಸ್ಪತ್ರೆಯ ಬೆಡ್ ಮೇಲೆ ಮೈ ತುಂಬಾ ರಕ್ತದ ಕಲೆಯಲ್ಲಿ ಮಿಂದ್ದೇದ್ದ ಈತನ ಹೆಸರು ಅಸ್ಲಾಂ ಅಂತಾ ಹುಬ್ಬಳ್ಳಿಯ ಗಾಯತ್ರಿ ನಗರದ ನಿವಾಸಿ ಖಾಸಗಿ ಬ್ಯಾಂಕ್ ನಲ್ಲಿ ಉದ್ಯೋಗಿ ಆಗಿದ್ದ ಈತ ಕೈತುಂಬಾ ಸಂಬಳ ಪಡೀತಿದ್ದ,ಹಾಗೆಯೇ ಕೆಲಸ ಮುಗಿದ ಮೇಲೆ ಸೀದಾ ತನ್ನ ಏರಿಯಾಕ್ಕೆ ಬಂದು ತನ್ನ ಸ್ನೇಹಿತರ ಜೊತೆ ಏರಿಯಾದಲ್ಲಿ ಧಮ್ ಹೊಡೀತಿದ್ದ,ಹೀಗೆ ಧಮ್ ಹೊಡೆಯುವ ಸ್ಪಾಟ್ ನಲ್ಲಿ ಪರಿಚಯನಾದವನೇ ಮಂಜು ಇಬ್ಬರ ನಡುವೆ ಉತ್ತಮ ಗೆಳೆತನ ಒಂದು ದಿನ ಇವನು ಧಮ್ ಹೊಡೆಸಿದ್ರೆ ಒಂದು ದಿನ ಅವನು ಧಮ್ ಹೊಡೆಸಬೇಕಿತ್ತು.

ಇವರಿಬ್ಬರ ನಡುವೆ ಮೊದಲಿಗೆ ದೋಸ್ತಿ ಚೆನ್ನಾಗಿಯೇ ಇತ್ತು ಆದ್ರೆ ಧಮ್ ಹೊಡೆಯಲು ಮಂಜುವಿನ ಬಳಿಯಲ್ಲಿ ಕೆಲವು ಸಲ ದುಡ್ಡು ಇರ್ತಿರಲಿಲ್ಲ ಹೀಗಾಗಿ ತನ್ನ ಬಳಿಯಿದ್ದ ಸ್ಮಾರ್ಟ್ ವಾಚ್ ಅಸ್ಲಾಂಗೆ ಕೊಟ್ಟು ಧಮ್ ಹೊಡೆಸುವಂತೆ ಹೇಳಿದ್ದ, ಅಸ್ಲಾಂ ಕೂಡಾ ಸ್ಮಾರ್ಟ್ ವಾಚ್ ಪಡೆದು ಆತನಿಗೆ ಧಮ್ ಹೊಡೆಸಿದ್ದ ಆದ್ರೆ 15 ದಿನಗಳು ಕಳೆದರು ಕೂಡಾ ಮಂಜುವಿಗೆ ಸ್ಮಾರ್ಟ್ ವಾಚ್ ನೀಡಿರಲಿಲ್ಲ ಅಸ್ಲಾಂ, ಹೀಗಾಗಿ ಮಂಗಳವಾರ ರಾತ್ರಿ ಮಂಜು ಅಸ್ಲಾಂ ನನ್ನ ವಾಚ್ ಕೊಡುಅಂತಾ ವೆಂಕಟೇಶ್ವರ ಕಾಲೋನಿಯಲ್ಲಿ ಕೇಳಿಕೊಂಡಿದ್ದಾನೆ.

ಆದ್ರೆ ಅಸ್ಲಾಂ ವಾಚ್ ಕೊಡದೆ ಮಂಜುನನ್ನು ಹೀಯಾಳಿಸಿದ್ದಾನೆ ಅಲ್ಲಿಯೇ ಇಬ್ಬರ ನಡುವೆ ಮಾತಿಗೆ ಬೆಳೆದು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ, ಆಗ ಮಂಜು ಮನೆಯಿಂದ ತಂದಿದ್ದ ತರಕಾರಿ ಕತ್ತರಿಸುವ ಚಾಕುವಿನಿಂದ ಅಸ್ಲಾಂ ಎದೆಗೆ ಇರಿದ ಪರಿಣಾಮ ಅಸ್ಲಾಂ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ ಆತನ ಸ್ನೇಹಿತರೆ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದ್ರು ಕೂಡಾ ಅಸ್ಲಾಂ ಚಿಕಿತ್ಸೆ ಪಲಕಾರಿಯಾಗದೆ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page