ಹುಬ್ಬಳ್ಳಿಯಲ್ಲಿ “ಮದುವೆಯಾಗಿ” ‘9’ ತಿಂಗಳಲ್ಲೇ “ನೇಣು” ಬಿಗಿದುಕೊಂಡು “ಆತ್ಮಹತ್ಯೆ” ಮಾಡಿಕೊಂಡ “ಗಂಡ”…!
ಹುಬ್ಬಳ್ಳಿ:ಮದುವೆಯಾಗಿದ್ದ ಗಂಡ-ಹೆಂಡತಿಯ ಸಂಸಾರ ಕಲಹ ಏರ್ಪಟ್ಟು ಹೆಂಡತಿ ಗಂಡನ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗಂಡ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಲಿಂಗೇಶ್ವರ ನಗರದಲ್ಲಿ ನಡೆದಿದೆ.
ಕೋಟಿಲಿಂಗೇಶ್ವರ ನಗರದ ನಿಖಿಲ್ ಜೊತೆ ಕೇಶ್ವಾಪುರದ ಪ್ರೀತಿ ಎಂಬ ಯುವತಿಯ ಜೊತೆ 9 ತಿಂಗಳ ಹಿಂದೆ ಮದುವೆ ಆಗಿತ್ತು,ಮದುವೆಯಾಗಿ ಕೆಲವೇ ದಿನಗಳಲ್ಲಿ ಇಬ್ಬರ ದಾಂಪತ್ಯದ ನಡುವೆ ಬೀರುಕು ಮೂಡಿ ಮನಸ್ತಾಪ ಮೂಡಿತ್ತು.ಹೀಗಾಗಿ ಎರಡು ಕುಟುಂಬದವರ ನಡುವೆ ಸಂದಾನ ಮಾಡಲು ಹೋದರು ಕೂಡಾ ಆಗದ ಹಿನ್ನೆಲೆ ಪ್ರೀತಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಗಂಡ ನಿಖಿಲ್ ನಡತೆ ಸರಿ ಇಲ್ಲ ಎಂಬ ಮೇಲೆ ದೂರನ್ನು ನೀಡಿದ್ದಳಂತೆ.
ಈ ದೂರಿನ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನಿಖಿಲ್ ನನ್ನು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಓರ್ವ ಮಹಿಳಾ ASI ಅವರು ವಿಚಾರಣೆ ನಡೆಸಿ ಎರಡು ಕುಟುಂಬದವರು ಶಾಂತವಾಗಿ ಮನೆಯಲ್ಲಿ ಕುಳಿತು ಬಗೆಹರಿಸಿಕೊಳ್ಳಿ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.
ಈಗಷ್ಟೇ ಮದುವೆಯಾಗಿ ಹೆಂಡತಿ ಜೊತೆ ಚೆನ್ನಾಗಿ ಸಂಸಾರ ಮಾಡಬೇಕು ಎಂದು ಕನಸನ್ನು ಕಂಡಿದ್ದ ನಿಖಿಲ್ ಗೆ ಹೆಂಡತಿ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಿಸಿದ್ದು ಬೇಸರ ತಂದಿತ್ತು.ಹೀಗಾಗಿ ನಿನ್ನೇ ತಡ ರಾತ್ರಿ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಸದ್ಯ ಈ ಬಗ್ಗೆ ಗೋಕುಲ್ ಠಾಣೆಯ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲು ಮಾಡಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆ ಕೇಶ್ವಾಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಾತೇನಹಳ್ಳಿ ಅವರ ತಾಯಿ ಕೆಲವು ದಿನಗಳ ಹಿಂದೆ ಅಷ್ಟೇ ಮಾತ್ರವಿಯೋಗ ಆಗಿತ್ತು.ಹೀಗಾಗಿ ಎರಡು ದಿನಗಳ ಹಿಂದೆ ಅಷ್ಟೇ ಅವರು ಮತ್ತೆ ಕರ್ತವ್ಯಕ್ಕೇ ಹಾಜರಾಗಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದುಡ್ಡಿನ ವಿಚಾರವನ್ನು ಎಲ್ಲಿಯೂ ಮಾತನಾಡಿಲ್ಲ ಹಾಗೆಯೇ ಮನೆಯ ಸಮಸ್ಯೆಗಳನ್ನು ನೀವೇ ಕುಳಿತು ಬಗೆಹರಿಸಿಕೊಳ್ಳಿ ಅಂತಾ ಹೇಳಿದ್ದನ್ನು ಬಿಟ್ರೆ ಯಾವುದೇ ರೀತಿಯಾದ ಒತ್ತಡ ಹೇರಿಲ್ಲ ಅಂತಾ ಪೊಲೀಸ್ ಉನ್ನತ ಮೂಲದಿಂದ ತಿಳಿದು ಬಂದಿದೆ.