ಹುಬ್ಬಳ್ಳಿ
“ಹುಬ್ಬಳ್ಳಿಯ” ಪಾಲಿಕೆ ಕಚೇರಿ ಮುಂದಿನ ರಸ್ತೆಯಲ್ಲಿ “ಸಿಎಂ ಸಿದ್ದರಾಯಯ್ಯ”ಗೆ ಬೆಂಕಿ.! ಟ್ರಾಫಿಕ್ ಜಾಮ್
ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಕುರಿತು ಬಿಜೆಪಿಯ ಪ್ರತಿಭಟನೆಯ ಕಾವು ಇದೀಗ ಪಾಲಿಕೆಯ ಕಚೇರಿಯ ಆವರಣ ಬಿಟ್ಟು ಇದೀಗ ರಸ್ತೆಗೆ ಇಳಿದು ವಾಹನಗಳನ್ನು ತಡೆದು ಪ್ರತಿಭಟನೆ ಮಾಡುವ ಹಂತಕ್ಕೆ ಹೋಗಿದೆ.
ಸುಮಾರು ಅರ್ಧ ಗಂಟೆಗಳ ಕಾಲ ಮಹಾನಗರ ಪಾಲಿಕೆಯ ಕಚೇರಿಯ ಮುಂದಿನ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅರ್ಧಗಂಟೆಗಳ ಕಾಲ ರಸ್ತೆಯಲ್ಲಿಯೇ ಪ್ರತಿಭಟನೆ ಮಾಡಿದ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಟ ನಡೆಸಿದರು,ಕೂಡಲೇ ಸ್ಥಳಕ್ಕೆ ಆಗಮಿಸಿದ ಸಂಚಾರಿ ಎಸಿಪಿ ವಿನೋದ್ ಮುಕ್ತೇದಾರ,ಇನ್ಸ್ಪೆಕ್ಟರ್ ಗಳಾದ ಮರಳುಸಿದ್ದಪ್ಪ ಹಾಗೂ ಡಿಸೋಜಾ ಸ್ಥಳಕ್ಕೆ ಆಗಮಿಸಿ ಟ್ರಾಫಿಕ್ ಜಾಮ್ ಕ್ಲೀಯರ್ ಮಾಡಿದರು.