ಹುಬ್ಬಳ್ಳಿಯಲ್ಲಿ “ಅಕ್ರಮ ಅಕ್ಕಿ” ದಂದೇಗೆ “ಮಾಜಿ ಮಂತ್ರಿಯ ಆಪ್ತನೇ” ಕಿಂಗ್ ಪಿನ್..!?
ಹುಬ್ಬಳ್ಳಿ: ನಮ್ಮ ರಾಜ್ಯದಲ್ಲಿ ಬಡವರ ಹಸಿವನ್ನು ನೀಗಿಸಲು ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ ಆದ್ರೆ ಅದೆ ಅನ್ನ ಭಾಗ್ಯ ಯೋಜನೆ ಇದೀಗ ಕೆಲವೊಂದಿಷ್ಟು ಜನರಿಗೆ ಚಿನ್ನದ ಮೊಟ್ಟೆ ಇಡುವ ಭಾಗ್ಯವಾಗಿ ಮಾರ್ಪಟ್ಟಿದ್ದು.ಈ ಭಾಗ್ಯಕ್ಕೆ ಮಾಜಿ ಮಂತ್ರಿಗಳ ಆಪ್ತನೇ ದ್ವಾರಪಾಲಕನಾಗಿ ನಿಂತ ಸುದ್ದಿ ಇದೀಗ ರಹಸ್ಯವಾಗಿ ಉಳಿದಿಲ್ಲ.
ಹುಬ್ಬಳ್ಳಿ ತಾಲ್ಲೂಕಿನ ಗಂಗಿವಾಳ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಶಾಸಕರೊಬ್ಬರ ಸೋದರ ಸಂಬಂಧಿ ಹಾಗೂ ಮಾಜಿ ಮಂತ್ರಿಗಳ ಆಪ್ತ ಈ ದಂದೇಗೆ ಕುಮ್ಮಕ್ಕನ್ನು ನೀಡುತ್ತಿದ್ದರಂತೆ,ಹಂಗು ಹೀಂಗೂ ಈ ದಂದೆಯನ್ನು ಕಡಿವಾಣ ಹಾಕಲು ದಕ್ಷ ಅಧಿಕಾರಿ ಒಬ್ಬರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಕ್ಕಿಯ ಲಾರಿಯನ್ನು ಹಿಡಿದಾಗ ಇಲಾಖೆಯ ಹಿರಿಯ ಅಧಿಕಾರಿಗೆ ಮಂತ್ರಿ ಆಪ್ತ ಕರೆ ಮಾಡಿ ಅದು ನಮ್ದು ಬಿಟ್ಟು ಬಿಡ್ರಿ ಅಂತಾ ಹೇಳಿದ್ದಾರೆ.
ಅವರು ಹೇಳಿದಂತೆಯೇ ಹೆಸರಿಗೆ ದಕ್ಷ ಅಧಿಕಾರಿಯಂತಿದ್ದ ಸಾಹೇಬ್ರು ಆಯಿತಪ್ಪಾ ಆ ಗಾಡಿ ಯನ್ನು ಬಿಟ್ಟು ಕಳುಹಿಸು ಅಂತಾ ಗಾಡಿ ಹಿಡಿದ ದಕ್ಷ ಅಧಿಕಾರಿಗೆ ಹೇಳಿದ್ದಾರೆ,ಹಿರಿಯ ಅಧಿಕಾರಿಗಳ ಮಾತಿಗೆ ಮನ್ನಣೆ ನೀಡಿದ ಗಾಡಿ ಹಿಡಿದ ಅಧಿಕಾರಿ ಗಾಡಿಯನ್ನು ಬಿಟ್ಟು ಕಳುಹಿಸಿದ್ದಾರೆ.
ಸದ್ಯ ಇದೀಗ ಜಿಲ್ಲೆಗೆ ಹೊಸದಾಗಿ ಬಂದಿರೋ SP ಸಾಹೇಬ್ರು ಈ ಭಾಗದಲ್ಲಿ ನಡೆಯುತ್ತಿರೋ ಅಕ್ರಮ ಅಕ್ಕಿ ದಂದೇಗೆ ಹೇಗೆ ಕಡಿವಾಣ ಹಾಕುತ್ತಾರೆ ಎಂಬುದನ್ನು ಇದೀಗ ಕಾದು ನೋಡಬೇಕಿದೆ.