ನೂಲ್ವಿಯಲ್ಲಿ “ಕಾಮ”ದಾಟಕ್ಕೆ ಅಡ್ಡಿಯಾದ ‘ತಮ್ಮನನ್ನೇ’ ಕೊಲೆಗೈದ “ಅಕ್ಕ” ಹಾಗೂ ಆಕೆಯ ಪ್ರಿಯಕರ.
ಹುಬ್ಬಳ್ಳಿ:ನೂಲ್ವಿ ಗ್ರಾಮದಲ್ಲಿ ನಡೆದ ಕೊಲೆಯ ರಹಸ್ಯವನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಕೇವಲ 24 ಗಂಟೆಯಲ್ಲಿ ಬೇಧಿಸಿದ್ದು ಕೊಲೆಯ ಹಿಂದಿನ ಮರ್ಮವನ್ನು ಕಂಡು ಹಿಡಿದಿದ್ದಾರೆ.
ಕೊಲೆಯಾದ ಶಂಭು ಹಾಗೂ ಚೆನ್ನಪ್ಪ ಸ್ನೇಹಿತರು ಆಗಾಗ ಶಂಭುವಿನ ಮನೆಗೆ ಬರುತ್ತಿದ್ದ ಚೆನ್ನಪ್ಪನಿಗೆ ಗಂಡ ಮೃತಪಟ್ಟು ತವರು ಮನೆಯಲ್ಲಿದ್ದ ಶಂಭುವಿನ ಅಕ್ಕ ಬಸವ್ವನ ಜೊತೆ ಅನೈತಿಕ ಸಂಬಂಧ ಬೆಳೆದಿರತ್ತೆ.
ಈ ವಿಷಯ ತಿಳಿದು ಶಂಭು ಹಲವು ಬಾರಿ ಚೆನ್ನಪ್ಪನ ಜೊತೆ ಜಗಳ ಕೂಡಾ ಆಗಿರತ್ತೆ,ಆದ್ರೆ ಕಳೆದ ಶುಕ್ರವಾರ ರಾತ್ರಿ ಈ ಜಗಳ ಅತಿರೇಕಕ್ಕೆ ಹೋದಾಗ ಕುಡಿದ ಮತ್ತಿನಲ್ಲಿದ್ದ ಶಂಭುವಿನ ಮೇಲೆ ಚೆನ್ನಪ್ಪ ಕಲ್ಲಿನಿಂದ ತಲೆಗೆ ಹೊಡೆದು,ಆತನ ಮರ್ಮಾಂಗಕ್ಕೇ ಒದ್ದು ಕೊಲೆ ಮಾಡಿ ಅಲ್ಲಿಂದ ತನಗೆ ಏನು ಗೊತ್ತಿರದವರ ರೀತಿಯಲ್ಲಿ ತನ್ನ ದೈನಂದಿನ ಕಾರ್ಯದಲ್ಲಿ ತಲ್ಲೀನನಾಗುತ್ತಾನೆ.
ಆದ್ರೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ರಮೇಶ ಗೋಕಾಕ ಕೇವಲ 24 ಗಂಟೆಯಲ್ಲಿ ಚೆನ್ನಪ್ಪನನ್ನು ಚೆನ್ನಾಗಿ ಡ್ರೀಲ್ ಮಾಡಿದಾಗ ಚೆನ್ನಪ್ಪ ಎಲ್ಲ ಸತ್ಯವನ್ನು ಬಾಯಿಬಿಟ್ಟಿದ್ದಾನೆ.
ಸಧ್ಯ ತನ್ನ ಕಾಮದಾಟಕ್ಕೆ ಒಡ ಹುಟ್ಟಿದ ತಮ್ಮನನ್ನೇ ಕೊಲೆ ಮಾಡಲು ಸಂಚು ರೂಪಿಸಿದ ಅಕ್ಕ ಬಸವ್ವ ಹಾಗೂ ಆಕೆಯ ಪ್ರಿಯಕರನನ್ನು ಇದೀಗ ಪೊಲೀಸರು ಬಂಧಿಸಿ ಇದೀಗ ಜೈಲಿಗೆ ಅಟ್ಟಿದ್ದಾರೆ.