“ಪೊಲೀಸ್ ಜೀಪ್” ಮುಂದೆಯೇ “ರೀಲ್ಸ್” ಮಾಡಿದ್ದ “ಕಾನ್ಸ್ಟೇಬಲ್ ಬಸು” ಮಣ್ಣೂರ್ ಸಸ್ಪೆಂಡ್
ಹುಬ್ಬಳ್ಳಿ:ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ್ದ ಜೀಪ್ ಮುಂದೆ ಅಶ್ಲೀಲ ಡೈಲಾಗ್ ಗೆ ಟಿಕ್ ಟಾಕ್ ಮಾಡಿದ್ದ ಕಸಬಾಪೇಟ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ವಿರುದ್ದು ಮಾಧ್ಯಮಗಳಲ್ಲಿ ಶಿಸ್ತಿನ ಇಲಾಖೆಯಲ್ಲಿಯೇ ಆಶಿಸ್ತು ಎಂಬ ವಿಸ್ತೃತವಾದ ವರದಿಯನ್ನು ಪ್ರಸಾರ ಮಾಡಲಾಗಿತ್ತು.
ಇದೀಗ ವರದಿಯ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ್ದ ಜೀಪ್ ಮುಂದೆ ಡೈಲಾಗ್ ಹೊಡೆದಿದ್ದ ಕಸಬಾಪೇಟ್ ಠಾಣೆಯ ಕಾನ್ಸ್ಟೇಬಲ್ ಬಸು ಮಣ್ಣೂರ ನನ್ನು ಶಿಸ್ತಿನ ಇಲಾಖೆಯಲ್ಲಿ ಆಶಿಸ್ತು ತೋರಿದ ಹಿನ್ನೆಲೆ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಕಾನ್ಸ್ಟೇಬಲ್ ನನ್ನು ಅಮಾನತ್ತು ಮಾಡಿ ಆದೇಶವನ್ನು ಹೊರಡಿಸಿದ್ದಾರೆ.
ಜನರು ತಪ್ಪು ಮಾಡಿದಾಗ ಅವರಿಗೆ ತಿದ್ದಿ ಬುದ್ಧಿಯನ್ನು ಹೇಳಬೇಕಾದ ಪೊಲೀಸ್ ಸಿಬ್ಬಂದಿಯೇ ಪೊಲೀಸ್ ಠಾಣೆಯ ಮುಂದೆಯೇ ಬೇಜಾವದ್ಬಾರಿ ತೋರಿ ಆಶಿಸ್ತನ್ನು ತೋರಿದ್ದ, ಅಷ್ಟೇ ಅಲ್ಲದೆ ಸಾರ್ವಜನಿಕರು ಕೂಡಾ ಕಾನ್ಸ್ಟೇಬಲ್ ವರ್ತನೆಗೆ ಆಕ್ರೋಶವನ್ನು ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕಾಗಿ ಆಗ್ರಹ ಮಾಡಿದ್ದರು.
ಶಿಸ್ತಿನ ಇಲಾಖೆಯಲ್ಲಿ ಆಶಿಸ್ತು ತೋರಿದ ಪೊಲೀಸ್ ಕಾನ್ಸ್ಟೇಬಲ್ ಇದೀಗ ಅಮಾನತಾಗಿದ್ದು, ಮುಂದೆ ಬೇರೆ ಸಿಬ್ಬಂದಿ ರೀಲ್ಸ್ ಮಾಡೋವಾಗ ತಾವು ಇರೋ ಜಾಗ ಯಾವ ವಿಚಾರಕ್ಕೇ ರೀಲ್ಸ್ ಮಾಡಬೇಕು ಎಂಬ ಪ್ರಜ್ಞೆ ಇಲ್ಲದೆ ಹೋದ್ರೆ ಅವರಿಗೂ ಕೂಡಾ ಇದೆ ರೀತಿ ಅಮಾನತ್ತಿನ ಶಿಕ್ಷೆ ಯಾಗಬಹುದು ಎಂಬುದಕ್ಕೆ ಇದೊಂದು ಉದಾರಣೆ.