ಅಪರಾಧಎಕ್ಸ್ಲುಸೀವ್ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ “ಪ್ರೀತಿಯ ವಿಚಾರಕ್ಕೇ” ಯುವಕನ ಬರ್ಭರ “ಕೊಲೆ”..!
ಹುಬ್ಬಳ್ಳಿ: ತ್ರಿಕೋಣ ಪ್ರೇಮ ಕಥೆಗೆ ಯುವಕನ ಹತ್ಯೆ ಆಗಿರುವ ಘಟನೆ,ಹುಬ್ಬಳ್ಳಿಯ ನವನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಹಳೆ ಹುಬ್ಬಳ್ಳಿಯ ನೇಕಾರ ನಗರ ಮೂಲದ ವಿನಯ್ ಹತ್ಯೆಯಾದ ಯುವಕನಾಗಿದ್ದಾನೆ.
ಬುಧವಾರ ಸಂಜೆ ದಿನ ಯುವತಿಯ ಮಾಜಿ ಪ್ರೇಮಿ ಹುಬ್ಬಳ್ಳಿ ನವನಗರದ ರಾಘವೇಂದ್ರ 20 ವರ್ಷದ ವಿನಯ್ ನನ್ನು ಮಾತುಕತೆ ನೆಪದಲ್ಲಿ ಕರೆಸಿ ,ನಗರದ ನಿರ್ಜನ ಪ್ರದೇಶದಲ್ಲಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ
ವಿನಯ್ ಕಾಣೆ ಆಗುತ್ತಿದ್ದಂತೆ ಪೋಷಕರು ಪೊಲೀಸರ ಮೊರೆ ಹೋದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.ಸಧ್ಯ ಕೊಲೆ ಮಾಡಿದ ಆರೋಪಿ ರಾಘವೇಂದ್ರ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಗೆ ಶರಣಾಗಿದ್ದು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.