ಹುಬ್ಬಳ್ಳಿಯಲ್ಲಿ “ಕ್ರಿಕೆಟ್ ಬೆಟ್ಟಿಂಗ್” ಕೂಳ’ಗಳನ್ನು “ದೇವಸ್ಥಾನದ” ಸಮೀಪ ಇಟ್ಟು ಲಕ್ಷ ಲಕ್ಷ ಡೀಲ್…!
ಹುಬ್ಬಳ್ಳಿ: ಸಮಾಜದಲ್ಲಿ ನಡೆಯುತ್ತಿರೋ ದೋ ನಂಬರ್ ದಂದೇಗಳಿಗೆ ಕಡಿವಾಣ ಹಾಕಬೇಕಾದ ಶಿಸ್ತಿನ ಇಲಾಖೆಯಲ್ಲಿನ ಕೆಲವು ಸಿಬ್ಬಂದಿಗಳು ಮಾಡುವಂತಹ ದೋ ನಂಬರ್ ಕೆಲಸಕ್ಕೆ ಬೇಲಿಯೇ ಎದ್ದು ಹೊಲ ಮೆಯುವ ಪರಿಸ್ಥಿತಿಗೆ ಬಂದು ನಿಂತಿದೆ.
ನಮ್ಮ ಸಮಾಜದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಎಂಬ ಪೆಡಂಭೂತದ ಹಿಂದೆ ಬಿದ್ದ ಅದೆಷ್ಟೋ.ಜನ ಮನೆ ಮಠ ಎಲ್ಲವನ್ನು ಕಳೆದುಕೊಂಡು ಕೊನೆಗೆ ತಮ್ಮ ಪ್ರಾಣವನ್ನು ಕಳೆದುಕೊಂಡು ಮನೆಯವರನ್ನು ನಡು ಬೀದಿಯಲ್ಲಿಯೇ ತರುವಂಥ ಈ ಬೆಟ್ಟಿಂಗ್ ಕುಳಗಳನ್ನು ಒದ್ದು ಒಳಗೆ ಹಾಕುವ ಬಿಟ್ಟು ಅವರಿಂದಾನೆ ಡೀಲ್ ಮಾಡಿ ಲಕ್ಷ ಲಕ್ಷ ಹಣವನ್ನು ಇದೀಗ ಜೇಬಿಗೆ ಇಳಿಸುವ ಬೆಟಾಲಿಯಮ್ ಟೀಂ ಹಗಲಿರುಳು ಕಾರ್ಯವನ್ನು ನಿರ್ವಹಿಸುತ್ತಿದೆ.
ನಗರದ ಪ್ರಮುಖ ಠಾಣೆಯಲ್ಲಿ ಬೆಟ್ಟಿಂಗ್ ಆಡುತ್ತಿದ್ದ 7 ಕ್ಕೂ ಹೆಚ್ಚು ಜನರನ್ನು ಕರೆತಂದಿದ್ದ ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ಮಾಡೋದು ಬಿಟ್ಟು,ದೇವರ ಸನ್ನಿಧಿಗೆ ಕರೆದುಕೊಂಡು ಹೋಗಿ ದಕ್ಷಿಣೆ ವಸೂಲಿ ಮಾಡಿದ್ದಾರೆ ಅಂತಾ ದೇವಸ್ಥಾನದ ಗಂಟೆಗಳೇ ಹೇಳಿದೆ.
ಈ 7 ಜನರ ಪೈಕಿ ಕೇವಲ 4 ಜನರ ಮೇಲೆ ಮಾತ್ರ ಪ್ರಕರಣ ದಾಖಲಾಗಿದ್ದು ಇನ್ನುಳಿದವರನ್ನು ಸುಮ್ಮನೆ ದೇವರ ದರ್ಶನಕ್ಕೆ ಬಂದಿದ್ವಿ ಅಂತಾ ಹೇಳಿ ಅಂತಾ ಅರ್ಚಕರು ಕಳುಹಿಸಿದ್ದಾರಂತೆ,ಸದ್ಯ ಈ ಕುರಿತು ದೇವಸ್ಥಾನಕ್ಕೆ ಹೋದ ಭಕ್ತನೊಬ್ಬನ ಬಳಿ ಅರ್ಚಕ ಬರೋಬ್ಬರಿ 3 ಪೆಟ್ಟಿಗೆ ಡೀಲ್ ಮಾಡಿದ್ದಾನೆ ಅಂತಾ ಗಂಟೆ ಠನಾ ಠನಾ ಹೊಡೆದಿರೋ ಸಾಕ್ಷಿ ಕೂಡಾ ಇದೆ ಅಂತೆ ಭಕ್ತನ ಬಳಿ.
ಸದ್ಯ ಹೀಗೆಲ್ಲ ಬೇಕಾ ಬಿಟ್ಟಿ ಡೀಲ್ ಮಾಡುತ್ತಾ ಹಿರಿಯ ಅಧಿಕಾರಿಗಳಿಗೆ ಕಣ್ಣಿಗೆ ಮಣ್ಣೆರೆಚುತ್ತಿರೋ ಇಂತಹ ಸಿಬ್ಬಂದಿಗಳ ಮೇಲೆ ಮಹಾನವಮಿ ಒಳಗೆ ದೇವತೆ ಯಾವ ಕ್ರಮವನ್ನು ಕೈಗೊಳ್ಳುತ್ತಾಳೆ ಎಂಬುದು ಪುರಾಣದ ಮೂಲಕ ತಿಳಿದು ಬರಬೇಕಿದೆ.